ಅಪರಿಚಿತ ವಾಹನ ಡಿಕ್ಕಿ : ಬೈಕ್ ಸವಾರನ ಸಾವು

Call us

Call us

Call us

Call us

ಬೈಂದೂರು: ಬೈಂದೂರು ಠಾಣಾ ವ್ಯಾಪ್ತಿಯ ನಾಯಕನಕಟ್ಟೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಅಪರಿಚಿತ ವಾಹನವೊಂದು ಬೈಕ್ ಸವಾರನ ಮೇಲೆ ಹರಿದು ಹೋದ ಪರಿಣಾಮ ಬೈಕ್ ಸವಾರನ ಅರ್ಧದೇಹ ಛಿದ್ರಗೊಂಡು ಮೃತಪಟ್ಟ ವಿದ್ರಾವಕ ಘಟನೆ ವರದಿಯಾಗಿದೆ. ಮೃತಪಟ್ಟವರನ್ನು ಹೇರಂಜಾಲು ಗಾಣಿಗರ ಬೆಟ್ಟು ಮುತ್ತ ಗಾಣಿಗರ ಮಗ ವೀರೇಂದ್ರ ಗಾಣಿಗ ( 28 ) ಎಂದು ಗುರುತಿಸಲಾಗಿದೆ.

Call us

Click Here

Click here

Click Here

Call us

Visit Now

Click here

ವೀರೇಂದ್ರ ರಾತ್ರಿ ವೇಳೆಯಲ್ಲಿ ಬೈಂದೂರು ಕಡೆಯಿಂದ ಮನೆಗೆ ತೆರಳುತ್ತಿದ್ದ ವೇಳೆ ಈ ದುರ್ಘಟನೆ ಸಂಭವಿಸಿದೆ. ಛಿದ್ರಗೊಂಡ ದೇಹ ಕೆಲವು ಹೊತ್ತು ರಸ್ತೆಯಲ್ಲಿಯೇ ಬಿದ್ದಿತ್ತು. ಮೃತಪಟ್ಟವರು ಯಾರೆಂದು ಗುರುತಿಸಲು ಸಾಧ್ಯವಾಗದ ಸ್ಥಿತಿಯಲ್ಲಿತ್ತು. ಸ್ಥಳಕ್ಕಾಗಮಿಸಿದರ ಬೈಂದೂರು ಪೊಲೀಸರು ಮಹಜರು ನಡೆಸಿ ಮೃತರ ಮೊಬೈಲ್ ಮೂಲಕ ಸಂಬಂಧಿಗಳಿಗೆ ಕರೆಮಾಡಿ ಗುರುತು ಪತ್ತೆ ಹಚ್ಚಿದ್ದರು.

ನಾಲ್ಕು ದಿನಗಳ ಹಿಂದೆ ಮುಂಬೈನಿಂದ ಊರಿಗೆ ಆಗಮಿಸಿದ್ದ ವಿರೇಂದ್ರ ಒಂದು ದಿನದಲ್ಲಿ ಮತ್ತೆ ಮುಂಬೈಗೆ ಹಿಂತಿರುಗುವವರಿದ್ದರು. ಅಷ್ಟರಲ್ಲೇ ಈ ದುರ್ಘಟನೆ ನಡೆದಿದೆ.

Leave a Reply

Your email address will not be published. Required fields are marked *

eighteen − one =