ಕಾರಂತರ ನುಡಿಮುತ್ತುಗಳು ಪ್ರಸ್ತುತ ಸಮಾಜಕ್ಕೆ ಕಿವಿಮಾತು: ಸೂರ್ಯಕಾಂತ್ ಬಿರಾದಾರ್

Call us

Call us

Click here

Click Here

Call us

Call us

Visit Now

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕೋಟ:
ಕಾರಂತರಿಗೆ ಕಾರಂತರೇ ಸಾಟಿ. ಅವರ ನೇರ ನುಡಿ, ವ್ಯಕ್ತಿತ್ವ, ಸಾಹಿತ್ಯ ಕೃಷಿ, ಪ್ರೇರಣದಾಯಕ, ಕಾರಂತರ ನುಡಿಮುತ್ತುಗಳು ಪ್ರಸ್ತುತ ಸಮಾಜಕ್ಕೆ ಕಿವಿಮಾತಾಗಿದ್ದು, ಅವರು ಕಾದಂಬರಿಗಳಲ್ಲಿ ತೋರಿಸುತ್ತಿದ್ದ ಪರಿಸರ ಪ್ರೇಮ ಅಮೋಘವಾದ್ದು, ಪರಿಸರ ಉಳಿಸಿ ಬೆಳೆಸೋದು ಪ್ರತಿಯೊಬ್ಬರ ಕರ್ತವ್ಯ ಎಂದು ಉಡುಪಿ ಜಿಲ್ಲಾ ಕೃಷಿ ಇಲಾಖೆ ಉಪ ನಿರ್ದೇಶಕ ಸೂರ್ಯಕಾಂತ್ ಬಿರಾದಾರ್ ಹೇಳಿದರು.

Call us

Call us

ಅವರು ಕೋಟದ ಡಾ. ಶಿವರಾಮ ಕಾರಂತ ಥೀಮ್ ಪಾರ್ಕ್‌ಗೆ ಭೇಟಿ ನೀಡಿ ಕಾರಂತರ ಕಂಚಿನ ಪುತ್ಥಳಿಗೆ ಮಾಲಾರ್ಪಣೆ ಮಾಡಿ ರಂಗಮಂದಿರ, ಆರ್ಟ್ ಗ್ಯಾಲರಿ, ಮಿನಿ ಸಂಭಾಗಣ, ಅಂಗನವಾಡಿ, ಗ್ರಂಥಾಲಯ, ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಕಾರಂತ ಥೀಮ್ ಪಾರ್ಕ್ ವಿಶೇಷ ಕರ್ತವ್ಯಾಧಿಕಾರಿ ಪೂರ್ಣಿಮಾ, ಕೋಟ ಕೃಷಿ ಅಧಿಕಾರಿ ಕುಮಾರಿ ಸುಪ್ರಭ, ಬ್ರಹ್ಮಾವರ ಕೃಷಿ ಇಲಾಖೆಯ ಸಿಬ್ಬಂದಿ ಕುಮಾರಿ ದೀಪಾಂಜಲಿ, ಥೀಮ್ ಪಾರ್ಕ್ ಮೇಲ್ವಿಚಾರಕ ಪ್ರಶಾಂತ್ ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

four × two =