ಟಿಪ್ಪರ್‌ ಢಿಕ್ಕಿ: ಬೈಕ್‌ ಸವಾರ ಸಾವು

Call us

Call us

Click here

Click Here

Call us

Call us

Visit Now

ಕುಂದಾಪುರ: ನಗರದ ಶಾಸ್ತ್ರಿ ಸರ್ಕಲ್‌ ಬಳಿ ಬುಧವಾರ ಮಧ್ಯಾಹ್ನ ಬೈಕ್‌ ಹಾಗೂ ಟಿಪ್ಪರ್‌ ನಡುವೆ ನಡೆದ ಅಪಘಾತದಲ್ಲಿ ಬೈಕ್‌ ಸವಾರ ಕುಂದಾಪುರ ಶೆರೂನ್‌ ಹೋಟೇಲ್‌ನ ಹರ್ಷ ರೆಫ್ರೆಶ್‌ಮೆಂಟ್‌ನ ಮೆನೇಜರ್‌ ನರಸಿಂಹ ಐತಾಳ್‌ (48) ಅವರು ಗಂಭೀರವಾಗಿ ಗಾಯಗೊಂಡು ಮೃತಪಟ್ಟಿದ್ದಾರೆ.

Call us

Call us

ಬುಧವಾರ ಮಧ್ಯಾಹ್ನ ಮನೆಗೆ ಕಡೆಗೆ ಸ್ಕೂಟರ್‌ನಲ್ಲಿ ತೆರಳುತ್ತಿದ್ದ ವೇಳೆ ಅವರಿಗೆ ಕೋಟೇಶ್ವರದತ್ತ ಸಾಗುತ್ತಿದ್ದ ಟಿಪ್ಪರ್‌ವೊಂದು ಹಿಂದಿನಿಂದ ಢಿಕ್ಕಿ ಹೊಡೆದಿತ್ತು. ಢಿಕ್ಕಿಯ ರಭಸಕ್ಕೆ ರಸ್ತೆಗೆ ಬಿದ್ದ ಐತಾಳ್‌ರ ಮೇಲೆ ಟಿಪ್ಪರ್‌ ಹರಿದ ಪರಿಣಾಮ ಅವರು ಗಂಭೀರವಾಗಿ ಗಾಯಗೊಂಡು ಮೃತಪಟ್ಟಿದ್ದಾರೆ.

ಮೂಲತಃ ಬಂಟ್ವಾಳದವರಾಗಿದ್ದ ಇವರು ಕಳೆದ ಇಪ್ಪತ್ತು ವರ್ಷಗಳಿಂದ ಕುಂದಾಪುರದಲ್ಲಿ ನೆಲೆಸಿದ್ದು, ಇದೇ ಹೋಟೇಲ್‌ನಲ್ಲಿ ಕೆಲಸನಿರ್ವಹಿಸುತ್ತಿದ್ದರು. ಪ್ರಸ್ತುತ ಅವರು ಬಾಡಿಗೆ ಮನೆಯಲ್ಲಿದ್ದು ಜೂ.11ರಂದು ಅವರ ಸ್ವಂತ ಮನೆಯ ಗೃಹಪ್ರವೇಶ ನಡೆಯಬೇಕಾಗಿತ್ತು. ಮೃತರು ಪತ್ನಿ ಹಾಗೂ ಓರ್ವ ಪುತ್ರಿಯನ್ನು ಅಗಲಿದ್ದಾರೆ.

Leave a Reply

Your email address will not be published. Required fields are marked *

5 × 4 =