ತ್ರಾಸಿ ಚರ್ಚ್‌ನ ಧರ್ಮಗುರು ಚಾರ್ಲ್ಸ್ ಲೂವಿಸ್ ಅವರಿಗೆ ಗೌರವ

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಗಂಗೊಳ್ಳಿ: ತ್ರಾಸಿ ಚರ್ಚ್‌ನ ಧರ್ಮಗುರು ಚಾರ್ಲ್ಸ್ ಲೂವಿಸ್ ಅವರ ಗುರುದೀಕ್ಷೆಯ 50 ವರ್ಷ ಪೂರೈಸಿದ ಅಂಗವಾಗಿ ತ್ರಾಸಿ ಚರ್ಚ್‌ನ ಸಭಾಂಗಣದಲ್ಲಿ ಅಭಿನಂದಿಸಿ ಗೌರವಿಸಲಾಯಿತು.

Click here

Click Here

Call us

Call us

Visit Now

Call us

Call us

ಉಡುಪಿ ಪ್ರಾಂತ್ಯದ ಧರ್ಮಾಧ್ಯಕ್ಷ ಜೆರಾಲ್ಡ್ ಐಸಾಕ್ ಲೋಬೋ ಅವರು ಚಾರ್ಲ್ಸ್ ಲೂವಿಸ್ ಅವರನ್ನು ಗೌರವಿಸಿ ಆಶೀರ್ವಚನ ನೀಡಿದರು. ಧರ್ಮಗುರು ಜೋಸೆಫ್ ಫೆರ್ನಾಂಡಿಸ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

ಜಾರ್ಜ್ ಡಿ’ಅಲ್ಮೇಡಾ ಮಾನಪತ್ರ ಹಸ್ತಾಂತರಿಸಿ ಶುಭ ಹಾರೈಸಿದರು. ಧರ್ಮಗುರು ಅನಿಲ್ ಕರ್ನೆಲಿಯೊ, ಕುಂದಾಪುರ ವಲಯ ವಿಗಾರ್ ವಾರ್ ಸ್ಟ್ಯಾನಿ ತಾವ್ರೊ, ಸಹೋದರಿ ಗ್ಲೇಡಿಸ್, ಕುಂದಾಪುರ ವಲಯದ ವಿವಿಧ ಚರ್ಚಿನ ಧರ್ಮಗುರುಗಳು, ಚರ್ಚಿನ 18 ಆಯೋಗದ ಸಂಚಾಲಕರು, ತ್ರಾಸಿ ಚರ್ಚಿನ ಪಾಲನಾ ಮಂಡಳಿ ಸದಸ್ಯರು ಉಪಸ್ಥಿತರಿದ್ದರು.

ತ್ರಾಸಿ ಚರ್ಚಿನ ಪಾಲನಾ ಮಂಡಳಿ ಉಪಾಧ್ಯಕ್ಷ ಮಾರ್ಕ್ ಡಿಅಲ್ಮೇಡಾ ಸ್ವಾಗತಿಸಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಕಾರ್ಯದರ್ಶಿ ಸಿಪ್ರಿಯಾನ್ ಡಿಸಿಲ್ವ ವಂದಿಸಿದರು.

Leave a Reply

Your email address will not be published. Required fields are marked *

fourteen − 10 =