ನಾವುಂದ ಶ್ರೀ ಬ್ರಹ್ಮ ಬೈದರ್ಕಳ ಗರಡಿ: ಸ್ವಾಗತ ಗೋಪುರ ಉದ್ಘಾಟನೆ

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ
ಬೈಂದೂರು: ಗರಡಿಯ ವಿಶ್ವಸ್ಥರು ಮತ್ತು ಅನುವಂಶಿಕ ಬಲ್ಲಾಳರಾದ ಚಂದ್ರಶೇಖರ ಶೆಟ್ಟಿ ಹಾಗೂ ಪಾರ್ವತಿ ವಿಶ್ವನಾಥ ಶೆಟ್ಟಿ ಮತ್ತು ಮಕ್ಕಳು ನಿರ್ಮಿಸಿಕೊಟ್ಟಿರುವ ನೂತನ ಸ್ವಾಗತ ಗೋಪುರ ಇತ್ತೀಚಿಗೆ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಉದ್ಘಾಟನೆಗೊಂಡಿತು.

Click Here

Call us

Call us

ಸ್ವಾಗತ ಗೋಪುರವನ್ನು ಉದ್ಘಾಟಿಸುವ ಮೂಲಕ ಅನುವಂಶಿಕ ಬಲ್ಲಾಳರ ಕುಟುಂಬದವರು, ಗರಡಿಯ ಕುಟುಂಬದವರು, ನಂಬಿದ ಭಕ್ತರು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಶ್ರೀ ಪಂಜುರ್ಲಿ ಮತ್ತು ಪರಿವಾರ ದೈವಗಳಿಗೆ ವಿಶೇಷ ಅಲಂಕಾರ ಪೂಜೆ ಸಲ್ಲಿಸಿದರು. ಪ್ರಸಾದ ವಿತರಣೆ ನಂತರ ಅನ್ನಸಂತರ್ಪಣೆ ನಡೆಯಿತು.

Click here

Click Here

Call us

Visit Now

ಈ ಸಂದರ್ಭದಲ್ಲಿ ಗರಡಿಯ ಟ್ರಸ್ಟಿ ಹಾಗೂ ಅನುವಂಶಿಕ ಬಲ್ಲಾಳರಾದ ಚಂದ್ರ ಶೇಖರ ಶೆಟ್ಟಿ, ಪಾರ್ವತಿ ಶೆಟ್ಟಿ, ವಿಶ್ವನಾಥ ಶೆಟ್ಟಿ, ಅಧ್ಯಕ್ಷರಾದ ಡಾ. ಎನ್ ಕೆ ಬಿಲ್ಲವ, ಆಡಳಿತ ಮೊಕ್ತೇಸರರಾದ ಶೇಖರ ಪೂಜಾರಿ, ಸಮಿತಿಯ ಸದಸ್ಯರು ಹಾಗೂ ಮಾಜಿ ಅಧ್ಯಕ್ಷರಾದ ಮುತ್ತ ಬಿಲ್ಲವ, ಗರಡಿಯ ವಿಶ್ವಸ್ಥರಾದ ಸೀತಾರಾಮ ಬಿಲ್ಲವ, ಆರ್ ಕೆ ಬಿಲ್ಲವ, ಸತ್ಯಾವತಿ ಬಿಲ್ಲವ, ತಾಲೂಕು ಪಂಚಾಯತ್ ಸದಸ್ಯರಾದ ಹಕ್ಕಾಡಿ ಜಗದೀಶ ಪೂಜಾರಿ, ಹಿರಿಯ ಸಹಕಾರಿಗಳಾದ ಕೆ ಪುಂಡಲೀಕ ನಾಯಕ, ಶುಭದಾ ಶಾಲೆಯ ಮುಖ್ಯೋಪಧ್ಯಾಯರಾದ ರವಿರಾಜ ಶೆಟ್ಟಿ, ಕರುಣಾಕರ ಶೆಟ್ಟಿ, ಲಕ್ಷ್ಮಣ ಮಂಕಿ ಮನೆ ಮುಂತಾದ ಗಣ್ಯರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

two + one =