ಬೈಂದೂರು: ಅಪರಿಚಿತ ಲಾರಿ ಢಿಕ್ಕಿ-ಬೈಕ್ ಸವಾರನ ಸಾವು

Call us

Call us

Call us

Call us

ಕುಂದಾಪುರ: ತಾಲೂಕಿನ ಉಪ್ಪುಂದಂದಿಂದ ಬೈಂದೂರು ಕಡೆಗೆ ಸಾಗುತ್ತಿದ್ದ ಬೈಕಿಗೆ ಹಿಂಬದಿಯಿಂದ ಬಂದ ಲಾರಿ ಢಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರನಿಗೆ ಗಂಭೀರ ಗಾಯಗಳಾಗಿ ಚಿಕಿತ್ಸೆಗಾಗಿ ಆಸ್ಪತ್ರೆಗೆ ಸಾಗಿಸುತ್ತಿರುವಾಗ ಮೃತಪಟ್ಟ ಘಟನೆ ಇಂದು ಬೈಂದೂರಿನಲ್ಲಿ ನಡೆದಿದೆ.  ರೇಮಂಡ್ ನಜ್ರತ್ ಮೃತ ದುರ್ದೈವಿ.

Call us

Click Here

Click here

Click Here

Call us

Visit Now

Click here

ಘಟನೆಯ ವಿವರ:

ರೇಮಂಡ್ ನಜ್ರತ್ ಉಪ್ಪುಂದದ ತನ್ನ ಮನೆಯಿಂದ ಬೈಂದೂರಿನ ನಿತ್ಯಾನಂದ ನಗರಕ್ಕೆ ಕೆಲಸದ ನಿಮಿತ್ತ ತನ್ನ ಬೈಕಿನಲ್ಲಿ ರಾಷ್ಟ್ರೀಯ ಹೆದ್ದಾರಿ 66ಯಲ್ಲಿ ಸಾಗುತ್ತಿದ್ದ ವೇಳೆಗೆ ಹಿಂಬದಿಯಿಂದ ಬಂದ ಅಪರಿಚಿತ ಲಾರಿಯೊಂದು ಬೈಂದೂರಿನ ಸ್ಟೇಟ್ ಬ್ಯಾಂಕ್ ಆಫ್ ಮೈಸೂರಿನ ಎದುರು ಬೆಳಿಗ್ಗೆ 3:30ರ ವೇಳೆಗೆ ಬೈಕಿನ ಹಿಂಭಾಗಕ್ಕೆ ಢಿಕ್ಕಿ ಹೊಡೆದಿತ್ತು. ಢಿಕ್ಕಿ ಹೊಡೆದ ರಭಸಕ್ಕೆ ರೇಮಂಡ್ ನಜ್ರತ್ ರಸ್ತೆಗೆ ಬಿದ್ದುದರಿಂದ ಅವರ ತಲೆಗೆ ತೀವ್ರ ಗಾಯಗಳಾಗಿತ್ತು. ಆಪಘಾತವಾದ ಬಳಿಕ ಲಾರಿ ಚಾಲಕ ಲಾರಿಯನ್ನು ನಿಲ್ಲಿಸದೇ ಅಲ್ಲಿಂದ ಪರಾರಿಯಾಗಿದ್ದಾನೆ. ಬೆಳಗ್ಗಿನ ಸಮಯವಾದ್ದರಿಂದ ಆ ಮಾರ್ಗದಲ್ಲಿ ಯಾರೂ ಕೂಡ ಸಂಚರಿಸುತ್ತಿರಲಿಲ್ಲವಾದ್ದರಿಂದ ಬಹಳ ಹೊತ್ತಿನ ತನಕ ಅವರು ರಸ್ತೆಯ ಬದಿಗೆ ಬಿದ್ದಿದ್ದರೆಲ್ಲನಾಗಿದೆ. ತಡವಾಗಿ ಬಂದ ದಾರಿಹೋಕರೊಬ್ಬರು ಅಂಬುಲೆನ್ಸಿನಲ್ಲಿ ಆಸ್ಪತ್ರೆಗೆ ಸಾಗಿಸುವ ವ್ಯವಸ್ಥೆ ಮಾಡಿದರಾದರೂ, ಸಾಗಿಸುವ ವೇಳೆ ನಜ್ರತ್ ಮೃತಪಟ್ಟಿದ್ದಾರೆ. ಬೈಂದೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *

seven − six =