ವೈದ್ಯಕೀಯ ಶಿಬಿರ ಉದ್ಘಾಟನೆ

Call us

Call us

Click here

Click Here

Call us

Call us

Visit Now

ಕುಂದಾಪುರ: ರಾಮಕ್ಷತ್ರಿಯ ಯುವಕ ಮಂಡಳಿ, ಕುಂದಾಪುರ ರಾಮಕ್ಷತ್ರಿಯ ಕ್ಷೇತ್ರ ಸಮಿತಿ ಉಳ್ಳೂರು, ಸಾಂತಾವರ,ಮೇರ್ಡಿ, ಬಸ್ರೂರು, ಕಾರ್ತಿಕೇಯ ಫ್ರೆಂಡ್ಸ್‌ (ರಿ.) ಉಳ್ಳೂರು, ಕಂದಾವರ ಹಾಗೂ ಕಸ್ತೂರ್ಬಾ ಆಸ್ಪತ್ರೆ ಮಣಿಪಾಲ ಇವರ ಸಂಯುಕ್ತ ಆಶ್ರಯದಲ್ಲಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಮೂಡ್ಲಕಟ್ಟೆಯಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ ನಡೆಯಿತು.

Call us

Call us

ಉದ್ಯಮಿ, ದಾನಿ ನಾಗೇಶ್‌ ಶೇರೆಗಾರ್‌ ಅವರು ಈ ಕಾರ್ಯಕ್ರಮವನ್ನು ಉದ್ಘಾಟಿಸಿದರು.  ಅವರು ಮಾತನಾಡಿ ಈ ಆರೋಗ್ಯ ಶಿಬಿರ ಅತ್ಯಂತ ಉ‌ಯುಕ್ತವಾಗಿದ್ದು ಇದರ ಪ್ರಯೋಜನ ಇಲ್ಲಿಯ ನಾಗರಿಕರಿಗೆ ತಲುಪಲಿ ಇಂತಹ ಅರ್ಥಪೂರ್ಣ ಕಾರ್ಯಕ್ರಮಗಳಿಂದ ರಾಮಕ್ಷತ್ರಿಯ ಸಂಘ ಬಲಿಷ್ಠವಾಗುತ್ತದೆ ಎಂದರು. ಸಮಾರಂಭದ ಅಧ್ಯಕ್ಷತೆಯನ್ನು ರಾಮಕ್ಷತ್ರಿಯ ಸಂಘ ಕುಂದಾಪುರದ ಅಧ್ಯಕ್ಷ ಸುರೇಶ್‌ ಬೆಟ್ಟಿನ್‌ ವಹಿಸಿದ್ದು ಈ ವಾಜಪೇಯಿ ಆರೋಗ್ಯ ಶ್ರೀಕಾರ್ಯಕ್ರಮ ಶ್ಲಾಘನೀಯವಾಗಿದ್ದು ಎಲ್ಲರಿಗು ತಲುಪಲಿ ಎಂದರು. ರಾಮಕ್ಷತ್ರಿಯ ಸಂಘ ಉಳ್ಳೂರು ಇದರ ಅಧ್ಯಕ್ಷ, ಗ್ರಾ. ಪಂ.ಸದಸ್ಯ ಸುರೇಂದ್ರ ಶೇರೆಗಾರ್‌, ಸಚ್ಚಿದಾನಂದ, ಡಾ| ಚೇತನ್‌, ಸುವರ್ಣ ಮಹೋತ್ಸವ ಸಮಿತಿ ಅಧ್ಯಕ್ಷ ರಾಧಾಕೃಷ್ಣ ಯು, ಶಾಲಾ ಮುಖ್ಯೋಪಾಧ್ಯಾಯ ಕೆ. ಉಮೇಶ್‌, ಶಾಲಾ ಎಸ್‌.ಡಿ.ಎಂ.ಸಿ. ಅಧ್ಯಕ್ಷ ಎಸ್‌.ವಿ. ನಾಗರಾಜ್‌ ಮತ್ತಿತರರು ಅತಿಥಿಗಳಾಗಿ ಉಪಸ್ಥಿತರಿದ್ದದರು. ರಾಧಾಕೃಷ್ಣ ಯು. ಸ್ವಾಗತಿಸಿದರು.

 ರಾಮಕ್ಷತ್ರಿಯ ಯುವಕ ಮಂಡಳಿಯ ಸುವರ್ಣ ಮಹೋತ್ಸವ ಸಮಿತಿಯ ಕಾರ್ಯದರ್ಶಿ ರಾಜಶೇಖರ ಹೆಗ್ಡೆ ಕಾರ್ಯಕ್ರಮ ನಿರೂಪಿಸಿದರು. ಸಚ್ಚಿದಾನಂದ ಪ್ರಾಸ್ತಾವಿಕ ಮಾತುಗಳನ್ನಾಡಿ ದರು. ಬಳಿಕ ಮಣಿಪಾಲದ ತಜ್ಞ ವೈದ್ಯರುಗಳಿಂದ ಆರೋಗ್ಯ ತಪಾಸಣಾ ಶಿಬಿರ ನಡೆಯಿತು.

Leave a Reply

Your email address will not be published. Required fields are marked *

5 × one =