ಶಿವಮೊಗ್ಗದಲ್ಲಿ ನಡೆದ ಬೈಕ್ ಅಪಘಾತದಲ್ಲಿ ನೈಕಂಬ್ಳಿ ಸುರೇಶ್ ಶೆಟ್ಟಿ ಸಾವು

Call us

Call us

Call us

Call us

ಕುಂದಾಪುರ: ಭಾನುವಾರ ರಾತ್ರಿ ಶಿವಮೊಗ್ಗದ ಬಾಳೆಹೊನ್ನೂರಿನಲ್ಲಿ ನಡೆದ ಬೈಕ್ ಅಪಘಾತದಲ್ಲಿ ತಾಲೂಕಿನ ಇಡೂರು-ಕುಜ್ಞಾಡಿಯ ಸುರೇಶ್ ಶೆಟ್ಟಿ ನೈಕಂಬ್ಳಿ (27) ಎಂಬುವವರು ದಾರುಣವಾಗಿ ಮೃತಪಟ್ಟ ಘಟನೆ ವರದಿಯಾಗಿದೆ.

Call us

Click Here

Click here

Click Here

Call us

Visit Now

Click here

ಘಟನೆಯ ವಿವರ:
ಇಡೂರು-ಕುಂಜ್ಞಾಡಿಯ ರಾಜು ಶೆಟ್ಟಿ ಎಂಬುವವರ ಮಗನಾದ ಸುರೇಶ್ ಶೆಟ್ಟಿ ಬಾಳೆಹೊನ್ನೂರಿನ ಕಂಪೆನಿಯೊಂದರಲ್ಲಿ ಕಾರ್ಯನಿರ್ವಹಿಸುತ್ತಿದ್ದರು. ನಿನ್ನೆ ರಜೆ ಇದ್ದ ಕಾರಣ ದೇವಸ್ಥಾನಕ್ಕೆ ತೆರಳಿದ್ದ ಅವರು ದೇವರ ದರ್ಶನ ಪಡೆದು ಬೇರೊಂದು ದೇವಸ್ಥಾನಕ್ಕೆ ತೆರಳುತ್ತಿದ್ದಾಗ ಮಾರ್ಗ ಮಧ್ಯದಲ್ಲಿ ಟ್ಯಾಕ್ಟರ್ ವೊಂದಕ್ಕೆ ಢಿಕ್ಕಿಹೊಡೆದ ಪರಿಣಾಮ ಗಂಭೀರ ಗಾಯಗೊಂಡು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಮಂಗಳೂರಿನಲ್ಲಿ ಬೇರೊಂದು ನೌಕರಿ ಹುಡುಕಿದ್ದ ಅವರು ಒಂದೆರಡು ದಿನಗಳಲ್ಲಿ ಊರಿಗೆ ಹಿಂತಿರುಗುವವರಿದ್ದರು ಎನ್ನಲಾಗಿದೆ. ಸ್ನೇಹಜೀವಿಯಾಗಿದ್ದ ಸುರೇಶ್ ನಿಧನ ಸುದ್ದಿ ಕೇಳುತ್ತಿದ್ದಂತೆ ಅವರ ಕಂಪೆನಿಯ ಎಲ್ಲಾ ಸಹೋದ್ಯೋಗಿಗಳು ಆಸ್ಪತ್ರೆಗೆ ತೆರಳಿ ಅಂತಿಮ ದರ್ಶನ ಪಡೆದಿದ್ದಾರೆ. (ಕುಂದಾಪ್ರ ಡಾಟ್ ಕಾಂ ವರದಿ)

ಇತ್ತಿಚಿಗಷ್ಟೇ ಮೃತ ಸುರೇಶ್ ಶೆಟ್ಟಿಯವರ ತಂದೆ ರಾಜು ಶೆಟ್ಟಿ ಅವರ ಇಡೂರಿನಲ್ಲಿರುವ ಅಂಗಡಿಗೆ ಬೆಂಕಿ ತಗಲಿ ಅಪಾರ ನಷ್ಟ ಸಂಭವಿಸಿತ್ತು. ಈಗ ಮಗನನ್ನು ಕಳೆದುಕೊಂಡ ಅವರ ಕುಟುಂಬ ಕಣ್ಣೀರಿನಲ್ಲಿ ಕೈತೊಳೆಯುವಂತಾಗಿದೆ.

Leave a Reply

Your email address will not be published. Required fields are marked *

sixteen + 9 =