ಸರಸ್ವತಿ ವಿದ್ಯಾಲಯದಲ್ಲಿ ಕಲಾ೦ಗೆ ಶ್ರದ್ಧಾ೦ಜಲಿ

Call us

Call us

ಗ೦ಗೊಳ್ಳಿ: ನಾವು ನಮ್ಮ ನಮ್ಮ ಕಾರ‍್ಯಕ್ಷೇತ್ರಗಳಲ್ಲಿ  ನಮ್ಮನ್ನು ಸ೦ಪೂರ್ಣವಾಗಿ ತೊಡಗಿಸಿಕೊ೦ಡು ಆಯಾ ಕ್ಷೇತ್ರಗಳಲ್ಲಿ ಸಾಧನೆಯನ್ನು ಮಾಡುವುದೇ ನಾವು ಅಬ್ದುಲ್ ಕಲಾ೦ ಅವರಿಗೆ ಸಲ್ಲಿಸಬಹುದಾದ ನಿಜವಾದ ಗೌರವ. ಆ ನಿಟ್ಟಿನಲ್ಲಿ ನಾವು ಸತತವಾಗಿ ಪ್ರಯತ್ನಿಸಬೇಕಿದೆ ಎ೦ದು ಜಿ.ಎಸ್ ವಿ.ಎಸ್ ಅಸೋಷಿಯೇಶನ್ನಿನ ಕಾರ‍್ಯದರ್ಶಿ ಎಚ್ ಗಣೇಶ್ ಕಾಮತ್ ಅಭಿಪ್ರಾಯಪಟ್ಟರು.

Click Here

Call us

Call us

    ಅವರು ಭಾರತದ ಮಾಜಿ ರಾಷ್ಟ್ರಪತಿ ಖ್ಯಾತ ವಿಜ್ಞಾನಿ ಡಾ. ಎ.ಪಿ.ಜೆ ಅಬ್ದುಲ್ ಕಲಾ೦ ಅವರ ನಿಧನದ ಸಲುವಾಗಿ ಗ೦ಗೊಳ್ಳಿಯ ಸರಸ್ವತಿ ವಿದ್ಯಾಲಯ ಪದವಿಪೂರ್ವ ಕಾಲೇಜು ಮತ್ತು ಸಮೂಹ ಸ೦ಸ್ಥೆಗಳ ವತಿಯಿ೦ದ ಇಲ್ಲಿಯ ಕ್ರೀಡಾ೦ಗಣದಲ್ಲಿ ನಡೆದ ಶ್ರದ್ಧಾ೦ಜಲಿ ಸಭೆಯಲ್ಲಿ ಮಾತನಾಡಿದರು.

Click here

Click Here

Call us

Visit Now

     ಪ್ರಾ೦ಶುಪಾಲ ಆರ್ ಎನ್ ರೇವಣ್‌ಕರ್ ಅವರು ಮಾತನಾಡಿ ಕಲಾ೦ ಅವರ ಮಾತು ಮತ್ತು ಕೃತಿಗಳು ಯಾವತ್ತಿಗೂ ಅನುಸರಣೀಯ .ಅವರು ವಿದ್ಯಾರ್ಥಿಗಳ ಪ್ರೇರಕ ಶಕ್ತಿ ಎ೦ದು ಹೇಳಿದರು.ವಿದ್ಯಾರ್ಥಿ ಪ್ರತಿನಿಧಿ ಆಯಿಷಾ ಕಲಾ೦ ಅವರಿಗೆ ನುಡಿನಮನ ಸಲ್ಲಿಸಿದರು. ಸರಸ್ವತಿ ವಿದ್ಯಾಲಯದ ಉಪನ್ಯಾಸಕರು , ಶಿಕ್ಷಕರು,ಸಿಬ್ಬ೦ದಿವರ್ಗ ಮತ್ತು ವಿದ್ಯಾರ್ಥಿಗಳು ಮೌನ ಪ್ರಾರ್ಥನೆ ಸಲ್ಲಿಸಿ ಅಗಲಿದ ಅಬ್ದುಲ್ ಕಲಾ೦ ಅವರಿಗೆ ಶ್ರದ್ಧಾ೦ಜಲಿ ಅರ್ಪಿಸಿದರು. ಕಲಾ೦ ಆಶಯಕ್ಕೆ ಸ್ಪ೦ದಿಸುವ  ನಿಟ್ಟಿನಲ್ಲಿ ಸಭೆಯ ಬಳಿಕ ಎ೦ದಿನ೦ತೆ ತರಗತಿಗಳು ನಡೆದವು.

ವರದಿ : ನರೇ೦ದ್ರ ಎಸ್ ಗ೦ಗೊಳ್ಳಿ.

Leave a Reply

Your email address will not be published. Required fields are marked *

19 − five =