ಸಿದ್ಧಾಪುರ: ರಾಜ್ಯಾದ್ಯಂತ ಪಾದಯಾತ್ರೆ ಕೈಗೊಂಡ ಹೆಚ್. ಕೆ. ವಿವೇಕಾನಂದ ಅವರಿಗೆ ಸನ್ಮಾನ

Call us

Call us

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ:
ಪ್ರಬುದ್ಧ ಸಮಾಜ ನಿರ್ಮಾಣ ಮತ್ತು ಸೌಹಾರ್ದತೆಯ ಸಂದೇಶ ಸಾರುವ ಉನ್ನತ ಆಶಯವನ್ನಿರಿಸಿಕೊಂಡು ರಾಜ್ಯಾದ್ಯಂತ ಕಳೆದ 8 ತಿಂಗಳಿಂದ ಸುಮಾರು 8000 ಕಿ.ಮೀ. ಕ್ರಮಿಸಿರುವ ಬೆಂಗಳೂರಿನ ಸಾಹಿತಿ ಸಮಾಜಸೇವಕ ಹೆಚ್. ಕೆ. ವಿವೇಕಾನಂದ ಅವರ ಪಾದಯಾತ್ರೆಯು ಕುಂದಾಪುರ ತಾಲೂಕಿನ ಸಿದ್ದಾಪುರಕ್ಕೆ ಬಂದು ತಲುಪಿತು.

Call us

Click Here

Click here

Click Here

Call us

Visit Now

Click here

ಪಾದಯಾತ್ರೆ ಹೆಬ್ರಿಯಿಂದ ಶಂಕರನಾರಾಯಣ ತಲುಪುತ್ತಿದ್ದಂತೆ ಸಿದ್ಧಾಪುರ ಹಸಂಗಡಿ ರೋಟರಿ ಕ್ಲಬ್, ಯಕ್ಷ ನುಡಿಸಿರಿ ಬಳಗ ಸಿದ್ಧಾಪುರ, ಶಂಕರನಾರಾಯಣ ದೇವಸ್ಥಾನದ ಆಡಳಿತ ಮಂಡಳಿಯವರು ಮತ್ತು ಸಾರ್ವಜನಿಕರು ಅವರನ್ನು ಸ್ವಾಗತಿಸಿ ಸಮ್ಮಾನಿಸಿದರು.

ಈ ಸಂಧರ್ಭ ಶಂಕರನಾರಾಯಣ ದೇವಸ್ಥಾನದ ಆಡಳಿತ ಮಂಡಳಿಯ ಮೊಕ್ತೇಸರರಾದ ಲಕ್ಷ್ಮಿನಾರಾಯಣ ಉಡುಪ, ಲೇಖಕ ಮುಷ್ತಾಕ್ ಹೆನ್ನಾಬೈಲ್, ಸಿದ್ಧಾಪುರ ಹೊಸಂಗಡಿ ರೋಟರಿ ಅಧ್ಯಕ್ಷ ಸುಭಾಷ್ಚಂದ್ರ ಶೆಟ್ಟಿ, ಕಾರ್ಯದರ್ಶಿ ನಾಗೇಂದ್ರ ಯಡಿಯಾಳ, ಯಕ್ಷ ನುಡಿಸಿರಿ ಬಳಗದ ಕಾರ್ಯದರ್ಶಿ ಭೋಜರಾಜ ಶೆಟ್ಟಿ, ಸುಭಾಷ್ ಯಡಿಯಾಳ, ನಮಿತಾ ಯಡಿಯಾಳ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

15 + three =