ಹಂದಿಗಾಗಿ ಅಭಯಾರಣ್ಯದಲ್ಲಿ ಗುಂಡು ಇಟ್ಟಾತನ ಬಂಧನ

Call us

Call us

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ

Call us

Click Here

Click here

Click Here

Call us

Visit Now

Click here

ಅಮಾಸೆಬೈಲು: ಹಂದಿಗಳನ್ನು ಹಿಡಿಯಲೆಂದು ಅಕ್ರಮವಾಗಿ ಗುಂಡುಗಳನ್ನಿಟ್ಟ (ನಾಡಾ ಬಾಂಬ್) ಓರ್ವನನ್ನು ಬಂಧಿಸಿ ನಾಲ್ಕು ಗುಂಡುಗಳನ್ನು ವಶಪಡಿಸಿಕೊಂಡ ಘಟನೆ ಇಂದು ಅಮಾಸೆಬೈಲು ಗ್ರಾಮದ ಜಡ್ಡಿನಗದ್ದೆ ಕೆಳಾಸುಂಕ ಎಂಬಲ್ಲಿಯ ಆಗುಂಬೆ ಅಭಯಾರಣ್ಯ ಪ್ರದೇಶದಲ್ಲಿ ನಡೆದಿದೆ. ಕೆಳಾಸುಂಕ ನಿವಾಸಿ ರಾಘವ ಶೆಟ್ಟಿ (50) ಬಂಧಿತ ಆರೋಪಿ

ಅಮಾಸೆಬೈಲು ಅಭಯಾರಣ್ಯದಲ್ಲಿನ ಹಂದಿಗಳನ್ನು ಹಿಡಿಯಲೆಂದು ಕೆಳಾಸುಂಕದ ರಾಘವ ಶೆಟ್ಟಿ ಸ್ವತಃ ತಯಾರಿಸಿದ ಗುಂಡುಗಳನ್ನು ಗುರುವಾರ ರಾತ್ರಿ ಅಭಯಾರಣ್ಯದಲ್ಲಿ ಇಟ್ಟಿದ್ದರೆನ್ನಲಾಗಿದೆ. ಈ ಬಗ್ಗೆ ಸ್ಥಳೀಯರು ನೀಡಿದ ಮಾಹಿತಿಯ ಆಧಾರದಲ್ಲಿ ದಾಳಿ ನಡೆಸಿದ ಅರಣ್ಯಾಧಿಕಾರಿಗಳು ಆರೋಪಿಯನ್ನು ಬಂಧಿಸಿ, ಕೊಳೆತ ಪ್ರಾಣಿ ಚರ್ಮ ಹಾಗೂ ರಂಜಕದ ತುಂಡುಗಳನ್ನು ಬಳಸಿ ತಯಾರಿಸಲಾದ ಗುಂಡನ್ನು ವಶಪಡಿಸಿಕೊಂಡಿದ್ದಾರೆ. ಬಳಿಕ ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಡಿಸಲಾಗಿದೆ. (ಕುಂದಾಪ್ರ ಡಾಟ್ ಕಾಂ ಸುದ್ದಿ)

ಅಮಾಸೆಬೈಲು ವಲಯಾರಣ್ಯಾಧಿಕಾರಿ ಐ.ಆರ್ ದಫೇದಾರ್, ಡೆಪ್ಯುಟಿ ಆರ್.ಎಫ್.ಒ ವೀರಣ್ಣ, ಜಡ್ಡಿನಗದ್ದೆ ಫಾರೆಸ್ಟ್ ಗಾರ್ಡ್ ರಮೇಶ್ ಹಾಗೂ ಸಿಬ್ಬಂದಿಗಳು ದಾಳಿ ನಡೆಸಿದ್ದರು. (ಕುಂದಾಪ್ರ ಡಾಟ್ ಕಾಂ ಸುದ್ದಿ)

Leave a Reply

Your email address will not be published. Required fields are marked *

seven + twelve =