ಐಪಿಎಲ್ ಬೆಟ್ಟಿಂಗ್‌ನಲ್ಲಿ ತೊಡಗಿದ್ದ ಏಳು ಮಂದಿಯ ಬಂಧನ

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ,ಅ.09: ಐಪಿಎಲ್ ಕ್ರಿಕೆಟ್ ಬೆಟ್ಟಿಂಗ್ ಜುಗಾರಿಯಲ್ಲಿ ತೊಡಗಿಕೊಂಡಿದ್ದ 7 ಮಂದಿಯನ್ನು ತಾಲೂಕಿನ ಶಂಕರನಾರಾಯಣ ಪೊಲೀಸರು ಬಂಧಿಸಿದ್ದಾರೆ. ಸಿದ್ಧಾಪುರ ಸಮೀಪದ ಸುಬ್ರಹ್ಮಣ್ಯ ಕೊಠಾರಿ (36), ಸಂತೋಷ ಶೆಟ್ಟಿ (26), ಕಿರಣ್ ಪೂಜಾರಿ( 19), ವಿವೇಕ ಶೆಟ್ಟಿ (29), ಅಕ್ಷಯ ಪೂಜಾರಿ (23), ಜಯ ಶೆಟ್ಟಿ (36), ಅಪ್ಸರ್ (27) ಬಂಧಿತ ಆರೋಪಿಗಳು.

Click Here

Call us

Call us

ಸಿದ್ದಾಪುರ ಮಾಕೇಟ್ ಬಳಿ ಸಾರ್ವಜನಿಕ ಸ್ಥಳದಲ್ಲಿ ಈ ಬೆಟ್ಟಿಂಗ್ ನಡೆಸಲಾಗುತ್ತಿತ್ತು. ಅಕ್ರಮವಾಗಿ ಗುಂಪುಗೂಡಿಕೊಂಡು ನಿನ್ನೆ ನಡೆಯುತ್ತಿದ್ದ ಐಪಿಎಲ್ ಮ್ಯಾಚ್ ಟೀಮ್‌ಗಳಾದ ಹೈದ್ರಾಬಾದ್ ಸನ್ ರೈಸರ್ ಹಾಗೂ ಕಿಂಗ್ಸ್ ಇಲೇವನ್ ಪಂಜಾಬ್ ಕ್ರಿಕೆಟ್ ಸ್ಕೋರ್‌ನ ಮೇಲೆ 0 ಯಿಂದ 9 ಸಂಖ್ಯೆ ಒಳಗೆ ಯಾವುದಾದರು ಸಂಖ್ಯೆಗೆ 200 ರೂ ಕಟ್ಟಿದರೆ, ಅದರ ವಿನ್ನಿಂಗ್ ನಂಬ್ರಕ್ಕೆ 1500 ರೂ ಕೊಡುವುದಾಗಿ ಹೇಳುತ್ತಾ ಹಣವನ್ನು ಪಣವಾಗಿರಿಸಿ ಕ್ರಿಕೆಟ್ ಬೆಟ್ಟಿಂಗ್ ಜುಗಾರಿ ಆಟ ಆಡುತ್ತಿದ್ದ ವೇಳೆ ಈ ಖಚಿತ ಮಾಹಿತಿಯಂತೆ ದಾಳಿ ನಡೆಸಿದ ಪೊಲೀಸರು ಕ್ರಿಕೆಟ್ ಬೆಟ್ಟಿಂಗ್’ಗೆ ಬಳಸಿದ ಮೊಬೈಲ್ ಪೋನ್, 3,300ರೂ. ನಗದು ಹಾಗೂ ಕ್ರಿಕೆಟ್ ಸ್ಕೋರ್ ಸಂಖ್ಯೆ ಬರೆದ ಚೀಟಿಯನ್ನು ವಶಪಡಿಸಿಕೊಳ್ಳಲಾಗಿದೆ.

Click here

Click Here

Call us

Visit Now

ಪಿಎಸ್‌ಐ ಶ್ರೀಧರ ನಾಯ್ಕ್ ಹಾಗೂ ಸಿಬ್ಬಂದಿಗಳು ಈ ಕಾರ್ಯಾಚರಣೆ ನಡೆಸಿದ್ದಾರೆ ಆರೋಪಿಗಳನ್ನು ಬಂಧಿಸಿದ್ದು, ಶಂಕರನಾರಾಯಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 

Leave a Reply

Your email address will not be published. Required fields are marked *

4 × 3 =