Kundapra.com ಕುಂದಾಪ್ರ ಡಾಟ್ ಕಾಂ

ಉಪ್ಪಿನಕುದ್ರು ಗೊಂಬೆಯಾಟ ಅಕಾಡೆಮಿ: ತಿಂಗಳ ಕಾರ್ಯಕ್ರಮ ಸಂಪನ್ನ

ಕುಂದಾಪುರ: ಉಪ್ಪಿನಕುದ್ರು ಗೊಂಬೆಯಾಟ ಅಕಾಡೆಮಿ ಕಟ್ಟಡ ಗೊಂಬೆಮನೆಯಲ್ಲಿ ಜನವರಿ ತಿಂಗಳ ಕಾರ್ಯಕ್ರಮ ಜರುಗಿತು. ತಿಂಗಳ ಗೊಂಬೆ ಮನೆ ಅತಿಥಿಯಾಗಿ ಪತ್ರಕರ್ತ ಯು.ಎಸ್.ಶೆಣೈ ಭಾಗವಹಿಸಿದ್ದು, ಗೊಂಬೆಯಾಟ ಅಕಾಡೆಮಿ ಅಧ್ಯಕ್ಷ ಭಾಸ್ಕರ್ ಕೊಗ್ಗ ಕಾಮತ್ ಕಾರ್ಯಕ್ರಮದ ಪ್ರಾಯೋಜಕ ಜನ್ನಿ ವಾಸುದೇವ ಮೇಲಾಡಿ ಪುತ್ರರಾದ ನಾರಾಯಣ ಮೇಲಾಡಿ ಅವರನ್ನು ಸನ್ಮಾಸಿದರು.

ಯು. ವಾಮನ್ ಪೈ, ಅಶೋಕ್ ಮೇಲಾಡಿ ಹಾಗೂ ವಲ್ಲಭ ಸೂರಿ ಇದರು. ಕಾರ್ಯಕ್ರಮದ ಕೊನೆಯಲ್ಲಿ ಭವಾನಿ ವಲ್ಲಭ ಮತ್ತು ವಿದ್ಯಾ ಅವರಿಂದ ಭರತನಾಟ್ಯ ಕಾರ್ಯಕ್ರಮ ನಡೆಯಿತು. ಶ್ರೀ ಗೋಪಾಲಕೃಷ್ಣ ಬೊಂಬೆಯಾಟ ಸಂಘ ಕಾಸರಗೋಡು ಇವರಿಂದ ತೆಂಕುತಿಟ್ಟು ಯಕ್ಷಗಾನ ಗೊಂಬೆಯಾಟ ನರಕಾಸುರ ವಧೆ-ಗರುಡ ಗರ್ವಭಂಗ ಜರುಗಿತು.. ಉದಯ ಭಂಡಾರ್‌ಕಾರ್ ರು ಕಾರ್ಯಕ್ರಮ ನಿರೂಪಿಸಿದ್ದರು.

Exit mobile version