Kundapra.com ಕುಂದಾಪ್ರ ಡಾಟ್ ಕಾಂ

ವತ್ತಿನಕಟ್ಟೆ ನಾಗಮಂಡಲೋತ್ಸವ: ಉಗ್ರಾಣ ಮುಹೂರ್ತ

ಬೈಂದೂರು: ಇಲ್ಲಿನ ವತ್ತಿನಕಟ್ಟೆ ಶ್ರೀ ಮಹಾಸತಿ ಅಮ್ಮನವರ ದೇವಸ್ಥಾನದಲ್ಲಿ ಫೆ.09ರಿಂದ ಫೆ.13ರ ವರೆಗೆ ನಡೆಯುವ ಸಾರ್ವಜನಿಕ ಲಕ್ಷಮೋದಕ ಗಣಪತಿ ಮಹಾಯಾಗ ಮತ್ತು ಚತುಃ ಪವಿತ್ರ ನಾಗಮಂಡಲೊತ್ಸವದ ಪೂರ್ವಭಾವಿಯಾಗಿ ಶುಕ್ರವಾರ ದೇವಳದ ಪ್ರಧಾನ ಅರ್ಚಕ ಬಿ. ಕೃಷ್ಣಮೂರ್ತಿ ನಾವಡರ ನೆತೃತ್ವದಲ್ಲಿ ಧಾರ್ಮಿಕ ವಿಧಿ ವಿಧಾನದಿಂದ ಉಗ್ರಾಣ ಮುಹೂರ್ತ ಕಾರ್ಯಕ್ರಮ ನಡೆಯಿತು.

ಈ ಸಂದರ್ಭ ದೇವಸ್ಥಾನದ ಸೇವಾ ಸಮಿತಿ ಅಧ್ಯಕ್ಷ ಎನ್. ನಾಗರಾಜ ಶೆಟ್ಟಿ, ಹಾಗೂ ಸದಸ್ಯರು, ಮಾಚ ಪೂಜಾರಿ ಬೆಳ್ಗಲ್‌ಕಟ್ಟೆ, ನಾಗೇಂದ್ರ ಪೂಜಾರಿ ಕರಾವಳಿ ಶಿರೂರು, ತಿಮ್ಮಪ್ಪ ಪೂಜಾರಿ ಕಾಡಿಗುಂಡಿ ಬೈಂದೂರು, ರಾಮ ಮಡಿವಾಳ, ಸ್ತ್ರೀಶಕ್ತಿ ಸಂಘದ ಸದಸ್ಯರು ಉಪಸ್ಥಿತರಿದ್ದರು. ಫೆ.09ರಿಂದ ಈ ಕ್ಷೇತ್ರಕ್ಕೆ ಹೊರೆ ಕಾಣಿಕೆ ಕೊಡುವವರು ಕೊಡಬಹುದು ಎಂದು ದೇವಳದ ಸಮಿತಿ ತಿಳಿಸಿದೆ.

Exit mobile version