Kundapra.com ಕುಂದಾಪ್ರ ಡಾಟ್ ಕಾಂ

ಶಿರೂರು ಜಿಪಂ: ಕಾಂಗ್ರೆಸ್ ಅಭ್ಯರ್ಥಿ ಮದನಕುಮಾರ್ ಮತಯಾಚನೆ ಜೋರು

ಬೈಂದೂರು: ಶಿರೂರು ಜಿಲ್ಲಾ ಹಾಗೂ ಉಪ್ಪುಂದ ತಾಲೂಕು ಪಂಚಾಯತ್ ಚುನಾವಣೆ ಪ್ರಚಾರಕ್ಕೆ ಕಾಂಗ್ರೆಸ್ ಜಿಪಂ ಅಭ್ಯರ್ಥಿ ಮದನ್ ಕುಮಾರ್, ಸುಮಾರು 100ಕ್ಕೂ ಅಧಿಕ ಕಾರ್ಯಕರ್ತರ ತಂಡದವರೊಂದಿಗೆ ತಾರಾಪತಿ ಪ್ರದೇಶದಲ್ಲಿ ಮನೆಮನೆಗೆ ತೆರಳಿ ಮತಯಾಚಿಸಿದರು. ಉಪ್ಪುಂದ ತಾಪಂ ಅಭ್ಯರ್ಥಿ ಪ್ರಮಿಳಾ ದೇವಾಡಿಗ, ಬ್ಲಾಕ್ ಪ್ರಧಾನ ಕಾರ್ಯದರ್ಶಿ ಮೋಹನ್ ಪೂಜಾರಿ, ಗ್ರಾಪಂ ಸದಸ್ಯರಾದ ವಾಸುದೇವ ಪೂಜಾರಿ, ಶಾರದಾ, ಲಲಿತಾ, ರಾಮಚಂದ್ರ ಖಾರ್ವಿ, ಹರೀಶ್ಚಂದ್ರ ಖಾರ್ವಿ, ಗ್ರಾಮೀಣ ಕಾಂಗ್ರೆಸ್ ಅಧ್ಯಕ್ಷ ನಾರಾಯಣ ಖಾರ್ವಿ, ಬೂತ್ ಅಧ್ಯಕ್ಷರಾದ ಗೋವಿಂದ ಖಾರ್ವಿ, ವಾಸು ಖಾರ್ವಿ ಹಾಗೂ ಪಕ್ಷದ ಕಾರ್ಯಕರ್ತರು ಉಪಸ್ಥಿತರಿದ್ದರು.

Exit mobile version