Kundapra.com ಕುಂದಾಪ್ರ ಡಾಟ್ ಕಾಂ

ಕುಟುಂಬ ಕಲಹ: ಪತ್ನಿಗೆ ಚಾಕುವಿನಿಂದ ತಿವಿದ ಪತಿರಾಯ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಗಂಡಹೆಂಡಿರ ನಡವೆ ಮಾತಿಗೆ ಮಾತು ಬೆಳೆದು ವಿಕೋಪಕ್ಕೇರಿ ಹೆಂಡತಿಗೆ ಹೊಟ್ಟೆಗೆ ಚೂರಿ ಇರಿದ ಘಟನೆ ತಾಲೂಕಿನ ತ್ರಾಸಿಯಲ್ಲಿ ನಡೆದಿದೆ. ತಾಸ್ರಿ ನಿವಾಸಿ ರೇಷ್ಮಾ ಪೂಜಾರಿ(31) ಇರಿತಕ್ಕೊಳಗಾದ ಮಹಿಳೆ. ಚಂದ್ರ ಪೂಜಾರಿ ಚಾಕುವಿನಿಂದ ಇರಿದ ಪತಿರಾಯ.

ಹೊಳ್ಮಗೆ ನಿವಾಸಿಯಾದ ಚಂದ್ರ ಪೂಜಾರಿ ಪೂನ:ದ ಹೋಟೆಲ್‌ನಲ್ಲಿ ಕೆಲಸ ಮಾಡಿಕೊಂಡಿದ್ದರು. ಕೆಲವು ದಿನಗಳ ಹಿಂದಷ್ಟೇ ಊರಿಗೆ ಬಂದಿದ್ದ ಅವರು ತ್ರಾಸಿಯ ತನ್ನ ಪತ್ನಿಯ ಮನೆಗೆ ತಂಗಿದ್ದರು. ಮನೆಯಲ್ಲಿ ಯಾವುದೋ ವಿಚಾರಕ್ಕೆ ಮಾತಿಗೆ ಮಾತು ಬೆಳೆದು ಕೋಪಗೊಂಡ ಚಂದ್ರ ಪೂಜಾರಿ ಏಕಾಏಕಿ ಅಲ್ಲಿಯೇ ಇದ್ದ ಚೂರಿಯಿಂದ ಪತ್ನಿಯ ಹೊಟ್ಟೆ ಹಾಗೂ ಕೈಗೆ ತಿವಿದಿದ್ದಾರೆ. ಪತ್ನಿ ರೇಷ್ಮಾ ಅಲ್ಲಿಯೇ ಕೂಗಿಕೊಳ್ಳುತ್ತಾ ನೆಲಕ್ಕುರುಳಿದಾಗ ಚಂದ್ರ ಪೂಜಾರಿ ಅಲ್ಲಿಂದ ಪರಾರಿಯಾಗಲು ಯತ್ನಿಸಿದ್ದಾನೆ. ಕೂಡಲೇ ಸ್ಥಳೀಯರ ನೆರವಿನಿಂದಾಗಿ ಪೊಲೀಸರು ಅತನನ್ನು ಬಂಧಿಸಿದ್ದಾರೆ. ಕುಂದಾಪ್ರ ಡಾಟ್ ಕಾಂ ಸುದ್ದಿ

ಗಾಯಾಳುವನ್ನು ಕೂಡಲೇ ಕುಂದಾಪುರದ ಖಾಸಗಿ ಆಸ್ಪತ್ರೆಗೆ ಸಾಗಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Exit mobile version