Kundapra.com ಕುಂದಾಪ್ರ ಡಾಟ್ ಕಾಂ

ದೇವಾಡಿಗ ಸಮಾಜದ ಜಿಪಂ-ತಾಪಂ ಸದಸ್ಯರಿಗೆ ಅಭಿನಂದನಾ ಕಾರ್ಯಕ್ರಮ

????????????????????????????????????

ಉಪ್ಪುಂದ: ಇಲ್ಲಿನ ದೇವಾಡಿಗ ಸಂಘದ ಆಶ್ರಯದಲ್ಲಿ ಜಿಲ್ಲಾ ಹಾಗೂ ತಾಲೂಕು ಪಂಚಾಯತ್‌ಗೆ ಆಯ್ಕೆಯಾದ ಸಮುದಾಯದ ಅಭ್ಯರ್ಥಿಗಳಿಗೆ ಅಭಿನಂದನಾ ಸಮಾರಂಭ ಉಪ್ಪುಂದ ಮಾತೃಶ್ರೀ ಸಭಾಭವನದಲ್ಲಿ ಜರುಗಿತು.

ಸಂಘದ ಅಧ್ಯಕ್ಷರಾದ ಬಿ.ಎ. ಮಂಜು ದೇವಾಡಿಗ ಅಧ್ಯಕ್ಷತೆವಹಿಸಿದ್ದರು. ಈ ಸಂದರ್ಭದಲ್ಲಿ ಖಂಬದಕೋಣೆ ಕ್ಷೇತ್ರದಿಂದ ಜಿಪಂಗೆ ಆಯ್ಕೆಯಾದ ಗೌರಿ ದೇವಾಡಿಗ, ಹೆಮ್ಮಾಡಿ ಕ್ಷೇತ್ರದಿಂದ ತಾಪಂಗೆ ಆಯ್ಕೆಯಾದ ರಾಜು ದೇವಾಡಿಗ ತ್ರಾಸಿ, ಉಪ್ಪುಂದ ಕ್ಷೇತ್ರದಿಂದ ತಾಪಂಗೆ ಆಯ್ಕೆಯಾದ ಪ್ರಮೀಳಾ ದೇವಾಡಿಗ, ಬೀಜೂರು ಕ್ಷೇತ್ರದಿಂದ ತಾಪಂಗೆ ಆಯ್ಕೆಯಾದ ಜಗದೀಶ ದೇವಾಡಿಗ, ಯಡ್ತರೆ ಕ್ಷೇತ್ರದಿಂದ ತಾಪಂಗೆ ಆಯ್ಕೆಯಾದ ಸುಜಾತ ದೇವಾಡಿಗ ಇವರನ್ನು ಸನ್ಮಾನಿಸಲಾಯಿತು.

ಅಥಿತಿಗಳಾಗಿ ಯು. ಧರ್ಮಪಾಲ ದೇವಾಡಿಗ ಮುಂಬೈ, ಮೋಹನದಾಸ ಹಿರಿಯಡಕ, ನಾಗರಾಜ ಡಿ ಪಡುಕೋಣೆ, ಅಣ್ಣಯ್ಯ ಶೇರಿಗಾರ್, ಜನಾರ್ದನ ದೇವಾಡಿಗ ಬಾರ್ಕೂರು, ಯು. ಎ. ಮಂಜು ದೇವಾಡಿಗ, ಉಪಸ್ಥಿತರಿದ್ದರು. ಚಂದ್ರ ದೇವಾಡಿಗ ಸ್ವಾಗತಿಸಿ, ಮಂಜುನಾಥ ದೇವಾಡಿಗ ವಂದಿಸಿದರು. ನಾರಾಯಣರಾಜು ಕಾರ್ಯಕ್ರಮ ನಿರೂಪಿಸಿದರು.

Exit mobile version