Kundapra.com ಕುಂದಾಪ್ರ ಡಾಟ್ ಕಾಂ

ಕುಂದಾಪುರ, ಬಸ್ರೂರು, ಬೈಂದೂರು: ಪವಿತ್ರ ಶುಕ್ರವಾರ ಆಚರಣೆ

ಕುಂದಾಪ್ರ ಡಾಟ್ ಕಾಂ ಸುದ್ದಿ.

ಕುಂದಾಪುರ: ಸಂತ ಫಿಲಿಪ್ ನೆರಿ ಚರ್ಚ್ ಬಸ್ರೂರಿನಲ್ಲಿ ಪವಿತ್ರ ಶುಕ್ರವಾರವನ್ನು ಭಕ್ತಿಪೂರ್ವಕವಾಗಿ ಆಚರಿಸಲಾಯಿತು. ಸ್ಥಳೀಯ ಶಾಲೆಯ ಮೈದಾನಾದಲ್ಲಿ ಸ್ಥಳೀಯ ಚರ್ಚನ ಧರ್ಮಗುರುಗಳಾದ ವಂ ವಿಶಾಲ್ ಲೋಬೊರವರ ಮುಂದಾಳತ್ವದಲ್ಲಿ ಶಿಲುಬೆಯ ಹಾದಿಯನ್ನು ನಡೆಸಲಾಯಿತು. ಈ ಭಕ್ತಿ ಕಾರ್ಯದಲ್ಲಿ  ವಂ! ವಿಶಾಲ್ ಲೋಬೊರವರ ನೇತೃತ್ವದಲ್ಲಿ ಶುಭಶುಕ್ರವಾರದ ಧಾರ್ಮಿಕ ಕಾರ್ಯಗಳನ್ನು ನೆರವೇರಿಸದರು. ಪ್ರಭು ಯೇಸುವಿನ ಜೀವನದ ಪ್ರಮುಖ ಘಟನೆಗಳನ್ನು ಸ್ಮರಿಸಿ ಭಕ್ತಿಭಾವದಿಂದ ಅವರನ್ನು ನಮಿಸಿದರು.

ತಾಲೂಕಿನ ಕುಂದಾಪುರ, ಬೈಂದೂರು ಚರ್ಚ್ ಸೇರಿದಂತೆ ಎಲ್ಲಾ ಇಗರ್ಜಿಗಳು ಪವಿತ್ರ ಶುಕ್ರವಾರವನ್ನು ಶ್ರದ್ಧಾ ಭಕ್ತಿಯಿಂದ ಆಚರಿಸಲಾಯಿತು.

Exit mobile version