Kundapra.com ಕುಂದಾಪ್ರ ಡಾಟ್ ಕಾಂ

ಹಾರ್ಡ್‌ಬಾಲ್ ಕ್ರಿಕೆಟ್ ಪಂದ್ಯಾಟ: ಸೈಲಾಸ್ ಆಂಗ್ಲ ಮಾಧ್ಯಮ ಶಾಲೆಗೆ ಪ್ರಶಸ್ತಿ

Jpeg

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಇಲ್ಲಿನ ವಿಶ್ವ ವಿನಾಯಕ ಸಿಬಿಎಸ್ ಇ ಸ್ಕೂಲ್ ಆಶ್ರಯದಲ್ಲಿ ನಡೆದ ಆಹ್ವಾನಿತ ಶಾಲಾ ತಂಡಗಳ ಟಿ-೨೦ ಮಾದರಿಯ ಹಾರ್ಡ್‌ಬಾಲ್ ಕ್ರಿಕೆಟ್ ಪಂದ್ಯಾಟದಲ್ಲಿ ಉಡುಪಿ ಸೈಲಾಸ್ ಆಂಗ್ಲ ಮಾಧಮ ಶಾಲೆ ವಿದ್ಯಾರ್ಥಿಗಳ ತಂಡ ಪ್ರಥಮ, ತೆಕ್ಕಟ್ಟೆ ವಿಶ್ವ ವಿನಾಯಕ ವಿದ್ಯಾರ್ಥಿ ತಂಡ ಉತ್ತಮ ದ್ವಿತೀಯ ಸ್ಥಾನ ಪಡೆಯಿತು.

ಪಂದ್ಯ ಶ್ರೇಷ ಸೈಲಾಸ್ ಆಂಗ್ಲ ಮಾಧ್ಯಮ ಶಾಲೆ ವಿದ್ಯಾರ್ಥಿ ಶ್ವಾನ್ , ತೆಕ್ಕಟ್ಟೆ ವಿಶ್ವ ವಿನಾಯಕ ವಿದ್ಯಾರ್ಥಿ ಶ್ರೇಷ್ಠ ಆಟಗಾರನಾಗಿ ಭವನೇಶ್ ಕೆ.ಪುತ್ರನ್ ಹಾಗೂ ಸೈಲಾಸ್ ಆಂಗ್ಲ ಮಾಧ್ಯಮ ಶಾಲೆ ವಿದ್ಯಾರ್ಥಿ ಉತ್ತಮ ದಾಂಡಿಗನಾಗಿ ಶರಣ್ ಆಯ್ಕೆಯಾಗಿದ್ದಾರೆ
ವಿಶ್ವ ವಿನಾಯಕ ಸ್ಕೂಲ್ ಮೆನೇಜಿಂಗ್ ಟ್ರಸ್ಟಿ ಎಮ್.ಪ್ರಭಾಕರ ಶೆಟ್ಟಿ , ಮತ್ಸೋದ್ಯಮಿ ಕೃಷ್ಣ ಪುತ್ರನ್ , ಸಂಸ್ಥೆಯ ಶೈಕ್ಷಣಿ ನಿರ್ದೇಶಕ ಡಾ.ಸುರೇಶ್ ಶೆಟ್ಟಿ ಎಕ್ಕಾರ್ , ಸಂಸ್ಥೆಯ ಪ್ರಾಂಶುಪಾಲೆ ನಾಗರತ್ನ.ಎನ್.ಪಾಲನ್ ಹಾಗೂ ದೈಹಿಕ ಶಿಕ್ಷಣ ಶಿಕ್ಷಕ ವಸಂತ್ ಕುಮಾರ್ ಹೊಸಂಗಡಿ , ರಾಝಿಕ್, ಅನೀಷ್ , ಪ್ರಕಾಶ್ ಹೊಸಂಗಡಿ ಹಾಗೂ ಕ್ರೀಡಾಳುಗಳು ಉಪಸ್ಥಿತರಿದ್ದರು.

Exit mobile version