Kundapra.com ಕುಂದಾಪ್ರ ಡಾಟ್ ಕಾಂ

ಬೈಂದೂರು: ರಂಗ ಸುರಭಿ ರಂಗ ಶಿಬಿರ ಉದ್ಘಾಟನೆ

ಕುಂದಾಪ್ರ ಡಾಟ್ ಕಾಂ ಸುದ್ದಿ
ಬೈಂದೂರು: ಇಲ್ಲಿನ ಯುವ, ಶೈಕ್ಷಣಿಕ, ಸಾಮಾಜಿಕ ಹಾಗೂ ಸಾಂಸ್ಕ್ರತಿಕ ಸಂಸ್ಥೆಯಾದ ಯುಸ್ಕೊರ್ಡ್ ಟ್ರಸ್ಟ್(ರಿ) ಬೈಂದೂರು ಇದರ ಪ್ರಾಯೋಜಕತ್ವದಲ್ಲಿ ಸಾಂಸ್ಕ್ರತಿಕ ಸಂಸ್ಥೆ ಸುರಭಿ(ರಿ) ಬೈಂದೂರು ಸಹಯೋಗದಲ್ಲಿ ರಂಗ ಸುರಭಿ 23ದಿನಗಳ ರಂಗ ತರಬೇತಿ ಶಿಬಿರವನ್ನು ಹಿರಿಯ ರಂಗನಟ ನಿರ್ದೇಶಕ ರವೀಂದ್ರ ಕಿಣಿ ಉಪ್ಪುಂದ ಇವರು ಉದ್ಘಾಟಿಸಿದರು.

ಶಿಬಿರದ ಪ್ರಧಾನ ನಿರ್ದೇಶಕರಾದ ರಂಗ ತಜ್ಞ ಡಾ|| ಶ್ರೀಪಾದ ಭಟ್ , ಶ್ರೀ ಗಣೇಶ ಉಡುಪಿ, ಪ್ರಥ್ವಿನ್ ಉಡುಪಿ ಉಪಸ್ಥಿತರಿದ್ದರು. ಸಂಸ್ಥೆಯ ಅಧ್ಯಕ್ಷ ಶಿವರಾಮ ಕೊಠಾರಿ ಸ್ವಾಗತಿಸಿ, ಕಾರ್ಯದರ್ಶಿ ಲಕ್ಷ್ಮಣ ಕೊರಗ ಉಪಸ್ಥಿತರಿದ್ದು, ಸುರಭಿಯ ನಿರ್ದೇಶಕರ ಸುಧಾಕರ. ಪಿ ಬೈಂದೂರು ನಿರೂಪಿಸಿ, ಗಣಪತಿ ಹೋಬಳಿದಾರ್ ವಂದಿಸಿದರು. ಶಿಬಿರದಲ್ಲಿ ಸುಮಾರು 25 ಜನ ಯುವ ಕಲಾವಿದರು ಹಾಗೂ ಕಿರಿಯ ಕಲಾವಿದ ಹಾಗೂ ಕಲಾವಿದೆಯರು ತರಬೇತಿ ಪಡೆಯುತ್ತಿದ್ದಾರೆ.

Exit mobile version