ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಗಾಣಿಗ ಸಮಾಜದ ಪ್ರಮುಖ ಶಕ್ತಿ ಪೀಠವಾದ ಸಾವಿರಾರು ವರ್ಷಗಳ ಇತಿಹಾಸ ಹೊಂದಿರುವ ಇಲ್ಲಿನ ಶ್ರೀ ವ್ಯಾಸರಾಜ ಮಠದ ಜೀರ್ಣೊದ್ಧಾರ ಕಾರ್ಯ ಹಂತಿಮ ಹಂತದಲ್ಲಿದ್ದು ಸಮಾಜ ಭಾಂದವರ ಸಮ್ಮುಖದಲ್ಲಿ ಶ್ರಮದಾನ ಕಾರ್ಯಕ್ರಮ ಸೋಮವಾರ ಮಠದ ವಠಾರದಲ್ಲಿ ನಡೆಯಿತು. ವಿವಿಧ ಘಟಕಗಳ ಸಮಾಜ ಭಾಂದವರೂ ಹಾಗೂ ಮಹಿಳಾ ಸದಸ್ಯರು ಅತಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಸಿ ಶ್ರಮದಾನದ ಮೂಲಕ ಮಠದ ಸ್ವಚ್ಚತೆಯಲ್ಲಿ ಪಾಲ್ಗೊಂಡರು. ಇದೇ ಸಂದರ್ಭದಲ್ಲಿ ಕುಂದಾಪುರ ತಾಲೂಕು ಗಾಣಿಗ ಸೇವಾ ಸಂಘ ಅಧ್ಯಕ್ಷ ಶ್ರೀನಿವಾಸ ಗಾಣಿಗ, ಪ್ರಧಾನ ಕಾರ್ಯದರ್ಶಿ ಶಿವಾನಂದ ರಾವ್, ಕೋಶಾಧಿಕಾರಿ ಶಂಕರ ನಾರಾಯಣ ಗಾಣಿಗ ಬೀಜಾಡಿ, ಕುಂದಾಪುರ ಟಿಂಬರ್ ಡಿಪೊ ಮಾಲೀಕ ಗೋಪಾಲ ಗಾಣಿಗ, ಬಸ್ರೂರು ಗ್ರಾಮ ಪಂಚಾಯಿತಿ ಸದಸ್ಯ ನಾಗರಾಜ ಗಾಣಿಗ, ಹಿರಿಯರಾದ ಮಹಾಬಲ ಗಾಣಿಗ, ಕೊಗ್ಗ ಮಾಸ್ಟರ್, ನರಸಿಂಹ ಗಾಣಿಗ ಹಂಗಳೂರು, ಪುಂಡಲೀಕ ಗಾಣಿಗ, ಶಿಕ್ಷಕ ಭಾಸ್ಕರ ಗಾಣಿಗ ಕೊಡಪಾಡಿ, ಸುಬ್ರಮಣ್ಯ ಚರ್ಚ್ರೋಡ್, ನಿವೃತ್ತ ಸೈನಿಕ ರಾಮಚಂದ್ರ ಗಾಣಿಗ, ಚಂದ್ರಶೇಖರ ಕೋಡಿ, ಪಾಡುರಂಗ ಹಾಲಾಡಿ, ಸೀತಾರಾಮ ಹಾಲಾಡಿ, ಪ್ರಮೋದ್ ಗಾಣಿಗ ಗಂಗೊಳ್ಳಿ, ದಯಾನಂದ ಗಾಣಿಗ ಗಂಗೊಳ್ಳಿ, ಸೀತಾರಾಮ ಗಂಗೊಳ್ಳಿ, ನಾರಾಯಣ ಮಾಸ್ಟರ್ ಐರೋಡಿ, ಗೋವರ್ಧನ್ ಕುಂದಾಪುರ, ರೋಟರಿ ಜೋನಲ್ ಲಿಪ್ಟಿನೆಂಟ್ ಪ್ರಭಾಕರ್ ಬಿ ಕುಂಭಾಸಿ, ಕೋಟೇಶ್ವರ ಘಟಕ ಅಧ್ಯಕ್ಷ ಬಿ.ಜಿ ನಾಗರಾಜ ಬೀಜಾಡಿ, ಬಸ್ರೂರು ಘಟಕ ಅಧ್ಯಕ್ಷ ರಾಘವೇಂದ್ರ ಗಾಣಿಗ, ಮಾದಲಾದವರೂ ಉಪಸ್ಥಿತರಿದ್ದರು.