Kundapra.com ಕುಂದಾಪ್ರ ಡಾಟ್ ಕಾಂ

ರೊಜರಿ ಅಮ್ಮನವರ ಇಗರ್ಜಿಯಲ್ಲಿ ಈಸ್ಟರ್ ಆಚರಣೆ

ಕುಂದಾಪುರ: ಯೇಸುಕ್ರಿಸ್ತರು ಶಿಲುಬೆಗೇರಿ ಮೂರನೇ ದಿನ ಪುನರುತ್ಥಾನಗೊಂಡ ದಿನವಾದ ಈಸ್ಟರ್ ಹಬ್ಬವನ್ನು ಭಾನುವಾರ ಉಡುಪಿ ಜಿಲ್ಲೆಯಾದ್ಯಂತ ಭಕ್ತಿ ಹಾಗೂ ಸಂಭ್ರಮದಿಂದ ಆಚರಿಸಲಾಯಿತು. ಕತ್ತಲೆಯಲ್ಲಿ ಹೊಸದಾಗಿ ಬೆಂಕಿ ಉರಿಸಿ ಅದನ್ನು ಆಶಿರ್ವದಿಸಿ, ಪಾಸ್ಕಾ ಮೊಂಬತ್ತಿಯನ್ನು ಬೆಳಗಿಸಲ್ಪಟ್ಟು ಕುಂದಾಪುರ ರೊಜರಿ ಅಮ್ಮನವರ ಇಗರ್ಜಿಯಲ್ಲಿ ಪಾಸ್ಕ ಹಬ್ಬದ ವಿಧಿ ವಿಧಾನಗಳನ್ನು ನಡೆಸಲಾಯಿತು.

ಈ ಧಾರ್ಮಿಕ ವಿಧಿಯಲ್ಲಿ ಕುಂದಾಪುರ ಇಗರ್ಜಿಯ ವ| ಧರ್ಮಗುರು ಅನೀಲ್ ಡಿಸೋಜಾ, ವ|ಧರ್ಮಗುರು ಪ್ರವೀಣ್ ಅಮ್ರತ್ ಮಾರ್ಟಿಸ್ ಮತ್ತು ವ|ಧರ್ಮಗುರು ಪ್ರಕಾಶ್ ಪಾವ್ಲ್ ಡಿಸೋಜಾ, ಸಹಭಾಗಿಯಾಗಿದ್ದರು. ಅಥಿತಿ ವ|ಧರ್ಮಗುರು ಐವನ್‌ಡಿಸೋಜಾ ಪ್ರವಚನ ನೀಡಿದರು, ಈ ಪ್ರಾರ್ಥನ ವಿಧಿಯಲ್ಲಿ ಸಹಸ್ರಾರು ಭಕ್ತರು ಪ್ರಾರ್ಥನಾ ವಿಧಿಯಲ್ಲಿ ಪಾಲ್ಘೊಂಡರು.
-ಚಿತ್ರ ಬರ್ನಾಡ್ ಡಿಕೋಸ್ತಾ

Exit mobile version