ಕುಂದಾಪ್ರ ಡಾಟ್ ಕಾಂ ಸುದ್ದಿ.
ಕೋಟ: ಕುಂದಾಪುರ ಪರಿಸರದ ಶತಾಯುಷಿ ಅಜ್ಜಿ ಎಂದೇ ಖ್ಯಾತರಾದ ಶತಾಯುಷಿ ನೇತ್ರಾವತಿಯಮ್ಮ (101) ಅಲ್ಪಕಾಲದ ಅಸೌಖ್ಯದಿಂದ ಬುಧವಾರ ಸಾಲಿಗ್ರಾಮದಲ್ಲಿರುವ ಸ್ವಗೃಹದಲ್ಲಿ ನಿಧನರಾದರು. ಸಾಲಿಗ್ರಾಮದ ವಾಣಿವಿಲಾಸಿನಿ ಸಂಸ್ಕೃತ ಪಾಠಶಾಲೆಯ ಪ್ರಾಚಾರ್ಯರಾಗಿದ್ದ, ವೇದಮೂರ್ತಿ ದಿವಂಗತ ರಾಮಚಂದ್ರ ಶಾಸ್ತ್ರಿಯವರ ಧರ್ಮಪತ್ನಿಯಾಗಿರುವ ಇವರು, ಓರ್ವ ಪುತ್ರ, ನಾಲ್ವರು ಪುತ್ರಿಯರು, ಅಪಾರ ಬಂಧುಬಳಗವನ್ನು ಅಗಲಿದ್ದಾರೆ.