Kundapra.com ಕುಂದಾಪ್ರ ಡಾಟ್ ಕಾಂ

ಉದ್ಯಮಿ ಹುಸೇನ್ ಹೈಕಾಡಿ ಅವರಿಗೆ ಸಾಧನಾಶ್ರೀ ಪ್ರಶಸ್ತಿ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಜೆಸಿಐ ಪುತ್ತೂರು ಆತಿಥೇಯದಲ್ಲಿ ಜರುಗಿದ ರಜತವಿಕಾಸ ಅಭಿವೃದ್ಧಿ ಮತ್ತು ಬೆಳವಣಿಗೆ ವ್ಯವಹಾರ ಸಮ್ಮೇಳನದಲ್ಲಿ ಉದ್ಯಮ, ಸಮಾಜಸೇವಾ ಕ್ಷೇತ್ರದಲ್ಲಿ ತೊಡಗಿಕೊಂಡಿರುವ ಜೆಸಿ ಹುಸೇನ್ ಹೈಕಾಡಿ ಅವರಿಗೆ ಸಾಧನಾಶ್ರೀ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಈ ಸಂದರ್ಭದಲ್ಲಿ ರಾಷ್ಟ್ರೀಯ ವ್ಯವಹಾರ ವಿಭಾಗದ ನಿರ್ದೇಶಕ ಸಚಿನ್, ವಲಯಾಧ್ಯಕ್ಷ ಸಂದೀಪ್‌ಕುಮಾರ್, ಪೂರ್ವವಲಯಾಧ್ಯಕ್ಷ ಸಂಪತ್ ಸುವರ್ಣ, ಉಪಾಧ್ಯಕ್ಷ ನಿತಿನ್, ಕೃಷ್ಣಮೋಹನ್, ಚಂದ್ರಶೇಖರ್ ನಾಯರ್, ಕುಂದಾಪುರ ಸಿಟಿ ಜೆಸಿ ಅಧ್ಯಕ್ಷ ಮಂಜುನಾಥ ಕಾಮತ್, ಪೂರ್ವಾಧ್ಯಕ್ಷ ರಾಘವೇಂದ್ರ ನಾವಡ, ನಾಗೇಂದ್ರ ಪೈ, ಕಾರ್ಯದರ್ಶಿ ಗೌತಮ್ ನಾವಡ, ಸದಸ್ಯ ಶ್ರೀಕಾಂತ್ ಕೆ.ಎನ್ ಮೊದಲಾದವರು ಉಪಸ್ಥಿತರಿದ್ದರು.

Exit mobile version