Kundapra.com ಕುಂದಾಪ್ರ ಡಾಟ್ ಕಾಂ

ಮರವಂತೆ: ಗಾಳಿಮಳೆಗೆ ಕುಸಿದ ಮನೆ ದುರಸ್ತಿಗೆ ನೆರವು

ಕುಂದಾಪ್ರ ಡಾಟ್ ಕಾಂ ಸುದ್ದಿ.
ಮರವಂತೆಯಲ್ಲಿ ಗಾಳಿಮಳೆಗೆ ಮನೆ ಕುಸಿದುಹೋಗಿ ನಷ್ಟ ಅನುಭವಿಸಿದ ದಾಸಿಮನೆ ಲಕ್ಷ್ಮೀ ಖಾರ್ವಿ ಅವರಿಗೆ ಇಲ್ಲಿ ಮೀನುಗಾರಿಕಾ ಬಂದರು ಕಾಮಗಾರಿ ನಡೆಸುತ್ತಿರುವ ಎನ್‌ಎಸ್‌ಕೆ ಬಿಲ್ಡರ್ ವತಿಯಿಂದ ಅದರ ವ್ಯವಸ್ಥಾಪಕ ಕಿಶೋರ್ ರೂ. ೨೫೦೦೦ ನೆರವು ನೀಡಿದರು. ತಾಲ್ಲೂಕು ಪಂಚಾಯತ್ ಸದಸ್ಯ ಜಗದೀಶ ಪೂಜಾರಿ, ಸ್ಥಳೀಯ ಮೀನುಗಾರ ಸಮುದಾಯದ ಪ್ರಮುಖರಾದ ಎಂ. ರಾಮಕೃಷ್ಣ ಖಾರ್ವಿ, ಚಂದ್ರಗುಪ್ತ ಖಾರ್ವಿ ಇದ್ದರು.

Exit mobile version