Kundapra.com ಕುಂದಾಪ್ರ ಡಾಟ್ ಕಾಂ

ಬೈಂದೂರು ಚರ್ಚ್ ರಸ್ತೆ ದುರಸ್ತಿಗೆ ಕ್ರೈಸ್ತ ಸಮುದಾಯದವರಿಂದ ಶಾಸಕರಿಗೆ ಮನವಿ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಇಲ್ಲಿನ ಹೋಲಿಕ್ರಾಸ್ ಚರ್ಚ್‌ಗೆ ತೆರಳುವ ರಸ್ತೆಯನ್ನು ದುರಸ್ತಿಗಳಿಸುವಂತೆ ಕೋರಿ ಬೈಂದೂರು ವಲಯ ಕ್ಯಾಥೋಲಿಕ್ ಸಭಾ ಕ್ರೈಸ್ತ ಸಮುದಾಯದ ಪರವಾಗಿ ಬೈಂದೂರು ಶಾಸಕರ ಭವನದಲ್ಲಿ ಶಾಸಕ ಗೋಪಾಲ ಪೂಜಾರಿ ಅವರಿಗೆ ಮನವಿ ಸಲ್ಲಿಸಿದರು.

ಈ ಸಂದರ್ಭದಲ್ಲಿ ಚರ್ಚಿನ ಧರ್ಮಗುರು ರೋನಾಲ್ಡ್ ಮಿರಾಂಡಾ, ಕ್ಯಾಥೋಲಿಕ್ ಸಭಾ ಬೈಂದೂರು ವಲಯಾಧ್ಯಕ್ಷ ಇಗ್ನೇಷಿಯಸ್ ನಜ್ರತ್, ಕಾರ್ಯದರ್ಶಿ ಜೋಸ್ಟಿನ್ ರೋಡ್ರಿಗಸ್, ಜಿಲ್ಲಾ ಕೆಡಿಪಿ ಸದಸ್ಯ ರಾಜು ಪೂಜಾರಿ, ಬೈಂದೂರು ಕಾಂಗ್ರೆಸ್ ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ಮಾರ್ಟಿನ್ ಡಯಾಸ್ ಮೊದಲಾದವರು ಉಪಸ್ಥಿತರಿದ್ದರು.

 

Exit mobile version