Kundapra.com ಕುಂದಾಪ್ರ ಡಾಟ್ ಕಾಂ

ರೋಟರಿ ಸನ್‌ರೈಸ್ : ಪರಿಕ್ಷಾ ಪೂರ್ವ ತಯಾರಿ ಕಾಯಾಗಾರ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ರೋಟರಿ ಕ್ಲಬ್ ಕುಂದಾಪುರ ಸನ್‌ರೈಸ್ ವತಿಯಿಂದ ಕುಂದಾಪುರದ ಹೋಲಿ ರೋಜರಿ ಇಂಗ್ಲೀಷ್ ಮೀಡಿಯಂ ಪ್ರೌಢಶಾಲೆಯಲ್ಲಿ ಪರಿಕ್ಷಾ ಪೂರ್ವ ತಯಾರಿ ಕಾರ್ಯಾಗಾರ ನಡೆಯಿತು.

ಸಂಪನ್ಮೂಲ ವ್ಯಕ್ತಿ, ಬಸ್ರೂರು ನಿವೇದಿತಾ ಪ್ರೌಢಶಾಲೆ ಮುಖ್ಯೋಪಧ್ಯಾಯ ದಿನಕರ ಆರ್ ಶೆಟ್ಟಿ ಮಾತನಾಡಿ ಮಾನಸಿಕ ಧೃಡತೆ, ಕಲಿಕೆಯಲ್ಲಿ ಪೂರ್ವ ತಯಾರಿಯೊಂದಿಗೆ ಬದ್ದತೆಯನ್ನು ಹೊಂದಿದಾಗ ಉತ್ತಮ ಅಂಕ ಗಳಿಸಲು ಸಾಧ್ಯ ಆದುದರಿಂದ ವಿದ್ಯಾರ್ಥಿಗಳಿಗೆ ಪರೀಕ್ಷಾ ಪೂರ್ವ ತಯಾರಿ ಅಗತ್ಯ. ಆಗ ಮಾತ್ರ ವಿದ್ಯಾರ್ಥಿ ಜೀವನದಲ್ಲಿ ಯಶಸ್ವಿಯಾಗಿ ಹೊರಹೊಮ್ಮಲು ಸಾಧ್ಯ ಎಂದು ಹೇಳಿದರು.

ರೋಟರಿ ಸನ್‌ರೈಸ್ ಅಧ್ಯಕ್ಷರಾದ ಕೆ. ನರಸಿಂಹ ಹೊಳ್ಳ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಅಧ್ಯಕ್ಷತೆಯನ್ನು ಧರ್ಮಗುರು ವಂ| ಪ್ರವೀಣ್ ಅಮೃತ್ ಮಾರ್ಟಿಸ್ ಅವರು ವಹಿಸಿ ಪರಿಕ್ಷಾ ಪೋಬಿಯಾವನ್ನು ಹೋಗಲಾಡಿಸುವ ಕುರಿತು ತಿಳಿ ಹೇಳಿದರು.

ರೋಟರಿ ಸನ್‌ರೈಸ್‌ನ ಇಂಟರ‍್ಯಾಕ್ಟ್ ಛೇರ್‌ಮೆನ್ ಜಗದೀಶ್ ಚಂದ್ರನ್, ಸದಸ್ಯರಾದ ಉಲ್ಲಾಸ ಕ್ರಾಸ್ತಾ, ಡುಂಡಿರಾಜ್, ಗಿರಿಜಾ ಎಂ. ಗೋಪಾಲ್, ಶಾಲಾ ಮುಖ್ಯೋಪಧ್ಯಾಯಿನಿ ಸಿಸ್ಟರ್ ಜೋಯ್ಸ್‌ಲಿನ್ ಉಪಸ್ಥಿತರಿದ್ದರು. ಶಿಕ್ಷಕಿಯರಾದ ಪ್ರತಿಮಾ ಶೆಟ್ಟಿ ಸ್ವಾಗತಿಸಿದರು, ವತ್ಸಲಾ ಪರಿಚಯಿಸಿದರು. ಪ್ರಶಾಂತ್ ಲೂಯಿಸ್ ರೆಬೆರೊ ಕಾರ್ಯಕ್ರಮ ನಿರ್ವಹಿಸಿ, ಕು| ಮೈತ್ರಿ ವಂದಿಸಿದರು.

Exit mobile version