Kundapra.com ಕುಂದಾಪ್ರ ಡಾಟ್ ಕಾಂ

ಯಡ್ತರೆ: ಪಿಎಲ್‌ಡಿ ಬ್ಯಾಂಕ್‌ನ ಗೋಡೆ ಕೊರೆದು ಕನ್ನ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಇಲ್ಲಿನ ಯಡ್ತರೆ ಮಂಜಯ್ಯ ಶೆಟ್ಟಿ ಕಾಂಪ್ಲೆಕ್ಸ್‌ನಲ್ಲಿರುವ ಪ್ರಾಥಮಿಕ ಸಹಕಾರಿ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕಿನ ಗೋಡೆಯನ್ನು ಕೊರೆದು ಒಳನುಗ್ಗಿರುವ ಕಳ್ಳರು ಚಿನ್ನ ಹಾಗೂ ನಗದು ದೋಚುವ ವಿಫಲ ಯತ್ನ ನಡೆಸಿದ್ದಾರೆ.

ಬ್ಯಾಂಕಿನ ಎದುರಿನ ಶಟರ್ ಹಾಗೆಯೇ ಇದ್ದು, ಬಲಬಾಗದಲ್ಲಿ ಗೋಡೆಯನ್ನು ಕೊರೆದು ಒಳನುಗ್ಗಿದ್ದಾರೆ. ಬ್ಯಾಂಕಿನ ಒಳಗಡೆ ಇದ್ದ ಸಿಸಿ ಕ್ಯಾಮರಾವನ್ನು ಒಡೆದು ಹಾಕುವ ಪ್ರಯತ್ನ ನಡೆಸಿದ್ದು, ಮಾಹಿತಿ ದೊರೆಯಬಾರದೆಂಬ ಕಾರಣಕ್ಕೆ ಅದರ ಡಿವಿಆರ್’ ಕೊಂಡೊಯ್ದಿದ್ದಾರೆ. ಬ್ಯಾಕಿನ ಲಾಕರ್ ಎದುರು ಭಾಗದಲ್ಲಿಯೇ ಗೋಡೆ ಕೊರೆದಿದ್ದು, ವ್ಯವಸ್ಥಿತ ತಂಡ ಕಳ್ಳತನಕ್ಕೆ ಯತ್ನ ನಡೆಸಿರುವ ಶಂಕೆ ವ್ಯಕ್ತವಾಗಿದೆ. ಎರಡು ದಿನದ ಹಿಂದಷ್ಟೇ ಆಸೋಡು ಶ್ರೀ ನಂದಿಕೇಶ್ವರ ದೇವಸ್ಥಾನ ಹಾಗೂ ಎರಡು ಅಂಗಡಿ ಕಳವು ಪ್ರಕರಣದಲ್ಲಿಯೂ ದೇವಸ್ಥಾನದಲ್ಲಿ ದೇವಳ ಪ್ರಭಾವಳಿಯೊಂದಿಗೆ ಅಲ್ಲಿ ಅಳವಡಿಸಿದ್ದ ಸಿಸಿ ಕ್ಯಾಮರಾ ಹಾಗೂ ಡಾಟಾ ಸಂಗ್ರಹವಾಗುವ ಡಿವಿಆರ್ ಕದ್ದೊಯ್ದಿದ್ದರು. ಬೈಂದೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Exit mobile version