Kundapra.com ಕುಂದಾಪ್ರ ಡಾಟ್ ಕಾಂ

ಆಲೂರು ಪೋಷಕರ ಸಭೆ, ದಾನಿಗಳಿಗೆ ಸಮ್ಮಾನ

ಆಲೂರು: ಇಲ್ಲಿನ ಸರಸ್ವತಿ ಹಿರಿಯ ಪ್ರಾಥಮಿಕ ಶಾಲಾ ಮಕ್ಕಳ ಪೋಷಕರ ಸಭೆ ಹಾಗೂ ದಾನಿಗಳಿಗೆ ಸಮ್ಮಾನ ಸಮಾರಂಭ ನಿವೃತ್ತ ಮುಖ್ಯಶಿಕ್ಷಕ ಮಹಾಬಲ ಜೋಯಿಸ್ ಅವರ ಅಧ್ಯಕ್ಷತೆಯಲ್ಲಿ ಇತ್ತೀಚೆಗೆ ಜರಗಿತು.

ಮುಖ್ಯ ಅತಿಥಿ ಜಿಲ್ಲಾ ಪಂಚಾಯತ್ ಸದಸ್ಯೆ ಇಂದಿರಾ ಶೆಟ್ಟಿ ಹರ್ಕೂರು, ತಾಲೂಕು ಪಂಚಾಯತ್ ಸದಸ್ಯ ಎಚ್. ಮಂಜಯ್ಯ ಶೆಟ್ಟಿ, ಪ್ರಾಥಮಿಕ ಅನುದಾನಿತ ಶಾಲಾ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಕೆ. ವಿ. ಬಾಲಚಂದ್ರ ಶೆಟ್ಟಿ, ಸರಕಾರಿ ಪ್ರಾಥಮಿಕ ಶಾಲಾ ಸಂಘದ ಜಿಲ್ಲಾಧ್ಯಕ್ಷ ಶಶಿಧರ ಶೆಟ್ಟಿ, ಸರಸ್ವತಿ ಶಾಲಾ ಸಂಚಾಲಕ ಹೇಮಂತ್‌ಪಾಲ್ ಶೆಟ್ಟಿ, ಆಡಳಿತ ಮಂಡಳಿ ಸದಸ್ಯ ಎನ್. ಚಂದ್ರಶೇಖರ ಶೆಟ್ಟಿ, ಗ್ರಾಮ ಪಂಚಾಯತ್ ಸದಸ್ಯೆ ಸಾಕು ಆಚಾರಿ ಮೊದಲಾದವರು ಉಪಸ್ಥಿತರಿದ್ದರು.

ಶಾಲೆಯ ಅಭಿವೃದ್ಧಿ ಕಾರ್ಯಗಳಿಗೆ ಉದಾರ ನೆರವನ್ನು ನೀಡಿದ ದಾನಿಗಳಾದ ಗುತ್ತಿಗೆದಾರ ಅಶೋಕ್‌ಕುಮಾರ್ ಶೆಟ್ಟಿ ಹರ್ಕೂರು, ಉಡುಪಿ ವೆಟರ್ನರಿ ಸರ್ಜನ್ ಡಾ. ಸಂದೀಪ್‌ಕುಮಾರ್ ಶೆಟ್ಟಿ, ಉದ್ಯಮಿಗಳಾದ ಚಂದ್ರಶೇಖರ ಶೆಟ್ಟಿ ಕಟ್ಟಿನಮಕ್ಕಿ, ಸತೀಶ್‌ಕುಮಾರ್ ಹೆಗ್ಡೆ ಹಳ್ಳಿ ಆಲೂರು, ಗುರುಪ್ರಸಾದ್ ಹಳ್ಳಿ ಆಲೂರು, ಸಂಜೀವ ಶೆಟ್ಟಿ ಹಳ್ಳಿ ಜನ್ಮನೆ, ಸಚ್ಚಿದಾನಂದ ಶೆಟ್ಟಿ ಆಲೂರು, ಸುಧಾಕರ ಗಾಣಿಗ ಬೆಂಗಳೂರು ಹಾಗೂ ಉಮೇಶ್ ಆಚಾರ್ ಆಲೂರು ಅವರನ್ನು ಈ ಸಂದರ್ಭದಲ್ಲಿ ಗುರುತಿಸಿ ಗೌರವಿಸಲಾಯಿತು.

ಮುಖ್ಯಶಿಕ್ಷಕಿ ಶೈಲಜಾ ಆರ್. ಶೆಟ್ಟಿ ಅವರು ಸ್ವಾಗತಿಸಿದರು. ದೈಹಿಕ ಶಿಕ್ಷಣ ಶಿಕ್ಷಕ ಪ್ರವೀಣ್‌ಕುಮಾರ್ ಶೆಟ್ಟಿ ಅವರು ಪ್ರಾಸ್ತಾವಿಕ ಮಾತುಗಳನ್ನಾಡಿ ಕಾರ್ಯಕ್ರಮ ನಿರ್ವಹಿಸಿದರು. ಗೌರವಶಿಕ್ಷಕಿ ಶಶಿಕಲಾ ಅವರು ವಂದಿಸಿದರು.

Exit mobile version