Kundapra.com ಕುಂದಾಪ್ರ ಡಾಟ್ ಕಾಂ

ಬೈಂದೂರು ಶಾಸಕರಿಂದ ವಿವಿಧ ಕಾಮಗಾರಿಗಳಿಗೆ ಶಿಲನ್ಯಾಸ

ಕುಂದಾಪ್ರ ಡಾಟ್ ಕಾಂ ಸುದ್ದಿ
ಬೈಂದೂರು: ಬೈಂದೂರು ವಿಧಾನಸಭಾ ಕ್ಷೇತ್ರದ ಬೈಂದೂರು, ಕೊಲ್ಲೂರು ಹಾಗೂ ಜಡ್ಕಲ್ ಗ್ರಾಮ ಪಂಚಾಯತ್ ವ್ಯಾಪ್ತಿಯ ವಿವಿಧ ರಸ್ತೆ, ಸಮುದಾಯ ಭವನ ನಿರ್ಮಾಣಕ್ಕೆ ಬೈಂದೂರು ಶಾಸಕ ಕೆ. ಗೋಪಾಲ ಪೂಜಾರಿ ಶಿಲನ್ಯಾಸ ನೆರವೇರಿಸಿದರು.

ಗೋಳಿಹೊಳೆ ಗ್ರಾ.ಪಂ ವ್ಯಾಪ್ತಿಯ ಕೊಡಾಳಕೇರಿ ಎಸ್.ಟಿ ರಸ್ತೆ ಅಭಿವೃದ್ದಿ, ಕೊಲ್ಲೂರು ಗ್ರಾಮದ ಮಾವಿನಕಾರು ಎಂಬಲ್ಲಿ ಕಿರು ಸೇತುವೆ ನಿರ್ಮಾಣ, ಹಳ್ಳಿಬೇರು ಕೆಳಮಕ್ಕಿ ಸೇತುವೆಯಿಂದ ಎಸ್.ಟಿ ಕಾಲೋನಿಗೆ ಹೋಗುವ ರಸ್ತೆ ಅಭಿವೃದ್ದಿ, ಅಗ್ನಿತೀರ್ಥ (ನುಕ್ಸಾಲ್ ) ಹೊಳಗೆ ಕಿರು ಸೇತುವೆ ನಿರ್ಮಾಣ, ವಿರಾಜಪೇಟೆ – ಬೈಂದೂರು ರಸ್ತೆ ಕಿ.ಮೀ ೩೭೪.೦೩ ರಲ್ಲಿ ಸೇತುವೆ ಪುನರ್ ನಿರ್ಮಾಣ, ಜಡ್ಕಲ್ ಗ್ರಾಮ ಪಂಚಾಯತ್ ವ್ಯಾಪ್ತಿಯ ಎಸ್.ಟಿ ಕಾಲನಿಯಲ್ಲಿ ಸಮುದಾಯ ಭವನ ರಚನೆ, ಬೀಸಿನಪಾರೆ ಸಿಂಸಾಲ್ ಎಸ್.ಟಿ ಕಾಲನಿ ರಸ್ತೆ ಅಭಿವೃದ್ಧಿ., ಬಸ್ರಿಬೇರು ಎಸ್.ಟಿ ಕಾಲನಿ ರಸ್ತೆ ಅಬಿವೃದ್ದಿ ಶಿಲನ್ಯಾಸ ಜರುಗಿತು.

ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷ ಎಸ್. ರಾಜು ಪೂಜಾರಿ, ತಾಲೂಕ ಪಂಚಾಯತ್ ಸದಸ್ಯರಾದ ವಿಜಯ ಶೆಟ್ಟಿ,  ಮಾಜಿ ತಾಪಂ ಸದಸ್ಯ ರಮೇಶ್ ಗಾಣಿಗ, ಲೋಕೋಪಯೋಗಿ ಇಂಜಿನಿಯರ್ ಮೊದಲಾವರು ಉಪಸ್ಥಿತರಿದ್ದರು.

Exit mobile version