Kundapra.com ಕುಂದಾಪ್ರ ಡಾಟ್ ಕಾಂ

ಗೋವಾ: ರಸ್ತೆ ಅಪಘಾತದಲ್ಲಿ ಈರ್ವ ಕುಂದಾಪುರದ ಯುವಕರ ಸಹಿತ ಮೂವರ ಸಾವು

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಗೋವಾ ಕುಂಡ್ಲಿ ಸಮೀಪ ನಡೆದ ಇನ್ಸುಲೇಟರ್ ಹಾಗೂ ಬೈಕ್ ನಡುವಿನ ಭೀಕರ ರಸ್ತೆ ಅಪಘಾತದಲ್ಲಿ ಅಪರಿಚಿತ ಬೈಕ್ ಸವಾರ ಸೇರಿದಂತೆ ಇನ್ಸುಲೇಟರ್‌ನಲ್ಲಿದ್ದ ಕುಂದಾಪುರ ಮೂಲದ ಈರ್ವರು ದಾರುಣವಾಗಿ ಸಾವನ್ನಪ್ಪಿದ್ದಾರೆ. ಮರವಂತೆ ನಿವಾಸಿ ರಿಯಾಝ್ (೩೪) ಹಾಗೂ ತಲ್ಲೂರು ಕೋಟೆಬಾಗಿಲು ನಿವಾಸಿ (೨೫) ಗಣೇಶ್ ಮೃತರು.

ಮೀನು ತುಂಬಿಸಿಕೊಂಡು ಕುಂದಾಪುರ ಕಡೆಯಿಂದ ಗೋವಾದೆಡೆಗೆ ತೆರಳಿದ್ದ ಇನ್ಸುಲೇಟರ್ ಲಾರಿ ಕುಂಡ್ಲಿ ಎಂಬಲ್ಲಿ ಎದುರಿನಿಂದ ಬರುತ್ತಿದ್ದ ಬೈಕಿಗೆ ಢಿಕ್ಕಿ ಹೊಡೆದಿದ್ದಲ್ಲದೇ ನಿಯಂತ್ರಣ ತಪ್ಪಿದ ಇನ್ಸುಲೇಟರ್ ಪಲ್ಟಿಯಾಗಿ ಬಿದ್ದಿತ್ತು. ಅಫಘಾತದದ ರಭಸಕ್ಕೆ ಬೈಕ್ ಸವಾರ ಸೇರಿದಂತೆ ಮೂವರೂ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.

Exit mobile version