Kundapra.com ಕುಂದಾಪ್ರ ಡಾಟ್ ಕಾಂ

ಬಳ್ಕೂರು: ಏಳು ಮಂದಿಯ ಮೇಲೆ ಜೇನು ದಾಳಿ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ,ಡಿ1: ತಾಲೂಕಿನ ಬಳ್ಕೂರು ಗ್ರಾಮ ಪಂಚಾಯತ್‌ನ ಬಳಿ ರಸ್ತೆ ಬದಿಯಲ್ಲಿ ನೆಲಕ್ಕುರುಳಿದ್ದ ಮರದಲ್ಲಿ ಮರದ ಬುಡದಲ್ಲಿದ್ದ ಜೇನು ಹುಳು ದಾಳಿ ನಡೆಸಿದ ಪರಿಣಾಮ ಗ್ರಾಮಸ್ಥ ಸೇರಿದಂತೆ ಪಂಚಾಯತ್ ಸಿಬ್ಬಂಧಿಗಳು ಘಟನೆಯನ್ನು ಅಸ್ವಸ್ಥಗೊಂಡಿದ್ದಾರೆ.

ಘಟನೆಯಲ್ಲಿ ಬಡಾಬೆಟ್ಟು ನಿವಾಸಿ ಮಹೇಂದ್ರ, ಬಳ್ಕೂರು ನಿವಾಸಿಗಳಾದ ಲಕ್ಷ್ಮೀ, ಶಾರದಾ, ಜಯಲಕ್ಷ್ಮಿ, ಪ್ರಭಾಕರ ಬಿಲ್ಲವ, ಬಳ್ಕೂರು ಗ್ರಾಪಂ ಸಿಬ್ಬಂಧಿಗಳಾದ ಲಕ್ಷ್ಮೀ ಪೂರ್ಣಿಮಾ ಜೇನು ದಾಳಿಗೊಳಗಾಗಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮಹೇಂದ್ರ ಅವರ ಮೇಲೆ ಮೊದಲು ದಾಳಿ ಮಾಡಿದ್ದ ಜೇನು ಬಳಿಕ ಪಂಚಾಯತ್ ಸಿಬ್ಬಂಧಿಗಳು ಹಾಗೂ ಅವರನ್ನು ತಪ್ಪಿಸಲು ಬಂದ ಸ್ಥಳೀಯರ ಮೇಲೆಯೂ ದಾಳಿ ಮಾಡಿತ್ತು.

ಇಂದು ಬೆಳಿಗ್ಗೆಯಷ್ಟೇ ಖಂಬದಕೋಣೆ ಪ್ರಾಥಮಿಕ ಶಾಲೆಯ ಮಕ್ಕಳ ಮೇಲೆ ಗುರುಗುಂಜಿ ಹುಳು ದಾಳಿ ಮಾಡಿ 17 ಮಂದಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದಿದ್ದರು.

► ಖಂಬದಕೋಣೆ: ವಿದ್ಯಾರ್ಥಿಗಳಿಗೆ ಗುರುಗುಂಜಿ ಹುಳು ಕಡಿತ. ಅಪಾಯದಿಂದ ಪಾರು – http://kundapraa.com/?p=19611 .

Exit mobile version