Kundapra.com ಕುಂದಾಪ್ರ ಡಾಟ್ ಕಾಂ

ಲಯನ್ಸ್‌ಕ್ಲಬ್ ಬೈಂದೂರು-ಉಪ್ಪುಂದ: ವಲಯಾಧ್ಯಕ್ಷರ ಭೇಟಿ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಜನರ ಹಿತಕ್ಕಾಗಿ ಕಾರ್ಯಕ್ರಮಗಳನ್ನು ಆಯೋಜಿಸುವಾಗ ಅದರ ಪ್ರಯೊಜನ ಜನರಿಗೆ ತಲುಪುವ ಹಾಗೆ ಮಾಡುವುದಲ್ಲದೆ ಅದರಿಂದ ಜನರಿಗೆ ಆ ಕಾರ್ಯಕ್ರಮ ದ ಮೂಲ ಉದ್ದೇಶವನ್ನು ತಿಳಿಸಿ ಜನರಿರನ್ನು ತೊಡಗಿಸಿಕೊಳ್ಳುವಂತೆ ಲಯನ್ಸ್ ಸಂಸ್ಥೆ ಮಾಡುತ್ತಿರುವುದು ಹೆಮ್ಮೆಯ ಸಂಗತಿ ಎಂದು ಲಯನ್ಸ್ ಕ್ಲಬ್ ವಲಯಾದ್ಯಕ್ಷ್ರ ಕಿರಣ್ ಕುಂದಾಪುರ ಹೇಳಿದರು.

ಅವರು ನಾಗೂರು ಆಕಾಶ ಸಭಾಭವನದಲ್ಲಿ ಜರುಗಿದ ಲಯನ್ಸ್ ಕ್ಲಬ್ ಮತ್ತು ಲಯನೆಸ್ ಕ್ಲಬ್ ಬೈಂದೂರು ಉಪ್ಪುಂದಕ್ಕೆ ವಲಯ ಕ್ಲಬ್‌ಗಳ ಸಮ್ಮಿಲನ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ಲಯನ್ಸ್ ಅಧ್ಯಕ್ಷ ಡಾ|ವೆಂಕಟೇಶ್ ಉಪ್ಪುಂದ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಅತಿಥಿ ಯಾಗಿ ಆಗಮಿಸಿದ ಲಯನ್ಸ್ ಜಿಲ್ಲಾ ಸಂಪರ್ಕಾಧಿಕಾರಿ ಲಯನ್ ಏನ್. ಎಮ್. ಹೆಗq, ಲಯನೆಸ್ ಅದ್ಯಕ್ಷೆ ಮಮತಾ ಎಮ್ ರಾವ್, ವಿವಿದ ಲಯನ್ಸ್ ಕ್ಲಬ್ ಅದ್ಯಕ್ಷರು, ಬೈಂದೂರು ಉಪ್ಪುಂದ ಲಯನ್ಸ್ ಕ್ಲಬ್‌ನ ಪೂರ್ವಾದ್ಯಕ್ಷ ಜಿ ಗೊಕುಲ್ ಶೆಟ್ಟಿ, ಖಜಾಂಜಿ ವಿಕ್ರಮ್ ಶೆಟ್ಟಿ, ಲಯನೆಸ್ ಕಾರ್ಯ ದರ್ಶಿ ಶಿಲ್ಪಾ ಶೆಟ್ಟಿ ಹಾಗು ಮತ್ತಿತರರು ಹಾಜರಿದ್ದರು

Exit mobile version