Kundapra.com ಕುಂದಾಪ್ರ ಡಾಟ್ ಕಾಂ

ಗುಂಡಿ ಬಿದ್ದ ರಸ್ತೆ: ರಿಕ್ಷಾ ಚಾಲಕರಿಂದ ಶ್ರಮದಾನ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಮರವಂತೆಯ ಪ್ರಧಾನ ರಸ್ತೆಗಳಲ್ಲಿ ಒಂದಾದ ಮಹಾತ್ಮ ಗಾಂಧಿ ಮಾರ್ಗದಲ್ಲಿ ಬಿದ್ದಿರುವ ಹತ್ತಾರು ಗುಂಡಿಗಳಿಗೆ ಊರಿನ ರಿಕ್ಷಾ ಚಾಲಕರು ಮಂಗಳವಾರ ಗಟ್ಟಿ ಮಣ್ಣು ಭರ್ತಿಮಾಡಿ ತಾತ್ಕಾಲಿಕ ಕಾಯಕಲ್ಪ ನೀಡಿದರು. ತಮ್ಮೊಳಗೆ ದೇಣಿಗೆ ಒಟ್ಟುಗೂಡಿಸಿ ಮಣ್ಣು ತರಿಸಿಕೊಂಡ ಅವರು ಶ್ರಮದಾನ ಮಾಡಿ, ಸುರಿದ ಮಣ್ಣನ್ನು ಗಟ್ಟಿಗೊಳಿಸಿದರು. ಅಸಮರ್ಪಕವಾಗಿ ನಿರ್ಮಿಸಿದ ವೇಗತಡೆಗೆ ಮಣ್ಣಿನ ಇಳಿಜಾರು ನಿರ್ಮಿಸಿದರು. ಅವರ ಈ ಉಪಕ್ರಮವನ್ನು ಮೆಚ್ಚಿಕೊಂಡ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಕೆ. ಎ. ಅನಿತಾ ಮತ್ತಿತರರು ಅವರನ್ನು ಅಭಿನಂದಿಸಿದರೆ, ಸಾರ್ವಜನಿಕರಲ್ಲಿ ಕೆಲವರು ಈ ಕುರಿತು ಗಮನ ಹರಿಸದೆ ನಿರ್ಲಕ್ಷ್ಯ ತೋರಿರುವ ಸ್ಥಳೀಯಾಡಳಿತ ಮತ್ತು ಜನಪ್ರತಿನಿಧಿಗಳ ಬಗೆಗೆ ಅಸಮಾಧಾನ ವ್ಯಕ್ತಪಡಿಸಿದರು.

Exit mobile version