Kundapra.com ಕುಂದಾಪ್ರ ಡಾಟ್ ಕಾಂ

ಕಲಾಕ್ಷೇತ್ರ ಕುಂದಾಪುರ: ಜ.7-8 ಭಜನಾ ಸಂಧ್ಯಾ, ಸುಮಧುರ ಹಾಡುಗಳ ಸಂಗೀತ ಸಂಜೆ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಆ ಕಾಲದ ಹಾಡುಗಳ ಖದರೇ ಬೇರೆ. ಈ ಕಾಲದ ಸಂಗೀತ ಮತ್ತೆ ಮತ್ತೆ ಕೇಳಿದರೆ ಬೋರೇ. ಹೀಗೆ ರಾಗ ಎಳೆತ ಕೂರಬೇಡಿ! ಆ ಕಾಲ ಹಾಡುಗಳನ್ನು ಈ ಕಾಲದಲ್ಲಿ ಕೇಳುವ ಅವಕಾಶ ಕುಂದಾಪುರದ ಕಲಾಕ್ಷೇತ್ರ ಮಾಡಿಕೊಟ್ಟಿದೆ.

ಕುಂದಾಪುರದ ಬೋರ್ಡ್ ಹೈಸ್ಕೂಲ್ ವಠಾರದಲ್ಲಿ ಜನವರಿ 7ರ ಶನಿವಾರ ಸಿತಾರ್ ವಾದಕ ಅವಿನಾಶ್ ಹೆಬ್ಬಾರ್ ಸವಿನೆನಪಿಗಾಗಿ ಉಸ್ತಾದ್ ಫಯಾಝ್ ಖಾನ್ ಅವರಿಂದ ‘ಭಜನಾ ಸಂಧಾ’ ನಡೆದರೇ, ಜನವರಿ 8ರ ಭಾನುವಾರ ಸಂಜೆ 6ರಿಂದ ‘ಇನಿದನಿ’ ಸುಮಧುರ ಕನ್ನಡ ಹಾಡುಗಳ ಸಂಗೀತ ಸಂಜೆ ನಡೆಯಲಿದೆ. ಇಂದಿಗೂ ಕಾಡುವ ಹಳೆಯ ಹಾಡುಗಳು ಪ್ರಸಿದ್ಧ ಸಂಗೀತಗಾರರ ಕಂಠದಿಂದ ಮೂಡಿಬರಲಿದೆ. ಭಜನಾ ಸಂಧ್ಯಾ ಹಾಗೂ ಇನಿದನಿ ಸಂಗೀತಪ್ರಿಯರನ್ನು ಒಂದಿಷ್ಟು ಹೊತ್ತು ಸಂಗೀತ ಲೋಕದಲ್ಲಿ ತೇಲಿಸಲಿದೆ.

 

Exit mobile version