Site icon Kundapra.com ಕುಂದಾಪ್ರ ಡಾಟ್ ಕಾಂ

ಉಪನ್ಯಾಸಕಿ ಸೌಮ್ಯ ಹೇರಿಕುದ್ರು ಅವರಿಗೆ ಡಾಕ್ಟರೇಟ್

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಕುಂದಾಪುರದ ಭಂಡಾರ್ಕಾರ್ಸ್ ಕಾಲೇಜಿನಲ್ಲಿ ಕನ್ನಡ ಉಪನ್ಯಾಸಕಿ ಸೌಮ್ಯ ಹೇರಿಕುದ್ರು ಅವರ ’ಜ್ನಾನ ಮೀಮಾಂಸೆಯ ಆಧುನಿಕ ಜಿಜ್ನಾಸೆ: ತೇಜಸ್ವಿ ಕಥನದ ಹಿನ್ನೆಲೆಯಲ್ಲಿ’ ಎಂಬ ಸಂಶೋಧನಾ ಮಹಾಪ್ರಬಂಧಕ್ಕಾಗಿ ಮಂಗಳೂರು ವಿಶ್ವವಿದ್ಯಾನಿಲಯ ಪಿ.ಹೆಚ್.ಡಿ ಪದವಿ ಪ್ರದಾನ ಮಾಡಿದೆ.

ಮಂಗಳಗಂಗೋತ್ರಿ ಎಸ್.ವಿ.ಪಿ ಕನ್ನಡ ಅಧ್ಯಯನ ಸಂಸ್ಥೆಯ ಪ್ರಾಧ್ಯಾಪಕರಾದ ಡಾ. ಬಿ. ಶಿವರಾಮ ಶೆಟ್ಟಿಯವರ ಮಾರ್ಗದರ್ಶನದಲ್ಲಿ ಅವರು ಸಂಶೋಧನಾ ಮಹಾಪ್ರಬಂಧ ಮಂಡಿಸಿದ್ದರು. ಸೌಮ್ಯ ಹೇರಿಕುದ್ರು ಅವರು ನಿವೃತ್ತ ಮುಖ್ಯೋಪಾಧ್ಯಾಯರಾದ ಪಡುವರಿ ಮಂಜಯ್ಯ ಶೆಟ್ಟಿ ಮತ್ತು ಸುಮತಿಯವರ ಪುತ್ರಿಯಾಗಿದ್ದಾರೆ.

Exit mobile version