Kundapra.com ಕುಂದಾಪ್ರ ಡಾಟ್ ಕಾಂ

ಬೈಂದೂರು: ಕೆನರಾ ಬ್ಯಾಂಕ್ ಸ್ಥಳಾಂತರಿತ ಶಾಖೆ ಉದ್ಘಾಟನೆ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಹಳ್ಳಿಯ ಜನರ ಸೇವೆಗಾಗಿ ಹುಟ್ಟಿಕೊಂಡ ಕೆನರಾ ಬ್ಯಾಂಕ್ ಇಂದು ಬ್ಯಾಂಕಿಂಗ್ ಕ್ಷೇತ್ರದಲ್ಲಿ ವಿಶಿಷ್ಟವಾಗಿ ಗುರುತಿಸಿಕೊಂಡಿದ್ದು ಪ್ರಗತಿಯ ಹಾದಿಯಲ್ಲಿದೆ. ಗ್ರಾಹರಿಂದ ಬ್ಯಾಂಕು ಹಾಗೂ ಬ್ಯಾಂಕಿನಿಂದ ಗ್ರಾಹಕರು ಪರಸ್ಪರ ಹೊಂದಾಣಿಕೆಯ ವ್ಯವಹಾರ ನಡೆಸುವ ಮೂಲಕ ಉತ್ತಮ ಸಾಧನೆ ಮಾಡಲು ಸಾಧ್ಯವಾಗಿದೆ ಎಂದು ಸಹಾಯಕ ಮಹಾಪ್ರಬಂಧಕ ರಾಜಶೇಖರ ಮೇಟಿ ಹೇಳಿದರು.
ಅವರು ಇಲ್ಲಿನ ಮೂಕಾಂಬಿಕಾ ಕಾಂಪ್ಲೆಕ್ಸ್‌ಗೆ ನೆಲ ಅಂತಸ್ತಿಗೆ ಸ್ಥಳಾಂತರಗೊಂಡ ಕೆನರಾ ಬ್ಯಾಂಕ್ ಶಾಖೆಯನ್ನು ಲೋಕಾರ್ಪಣೆಗೊಳಿಸಿ ಮಾತನಾಡಿದರು.

ಕಟ್ಟಡದ ಮಾಲಿಕರಾದ ಬಾಲಯ್ಯ ಶೇರುಗಾರ್, ಉದ್ಯಮಿಗಳಾದ ವೆಂಕಟೇಶ ಕಿಣಿ, ಜಯಾನಂದ ಹೋಬಳಿದಾರ್ ಮೊದಲಾದವರು ಉಪಸ್ಥಿತರಿದ್ದರು. ವೆಂಕಟೇಶ್ ಕಿಣಿ ಎಟಿಎಂ ಕೇಂದ್ರವನ್ನು, ಬಾಲಯ್ಯ ಶೇರುಗಾರ್ ಭದ್ರತಾ ಕೊಠಡಿಯನ್ನು ಉದ್ಘಾಟಿಸಿದರು. ಬೈಂದೂರು ಶಾಖಾ ಪ್ರಬಂಧಕ ಪ್ರಭಾಕರ ಶೆಟ್ಟಿ ಸ್ವಾಗತಿಸಿ ಪ್ರಸ್ತಾವನೆಗೈದರು. ಸಿಬ್ಬಂಧಿ ದೀಪಕ್ ಕಾರ್ಯಕ್ರಮ ನಿರೂಪಿಸಿದರು.

 

Exit mobile version