Kundapra.com ಕುಂದಾಪ್ರ ಡಾಟ್ ಕಾಂ

ಮರವಂತೆ ಮೇಲ್‌ಸೇತುವೆ: ಸಂಚಾರ ಮುಕ್ತ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ನದಿ -ಕಡಲಿನ ಸಂಗಮವನ್ನು ಬೇರ್ಪ ಡಿಸುವ ಸುಂದರ ಹಾಗೂ ಪ್ರಖ್ಯಾತ ಮರವಂತೆ ಕಡಲ ತೀರದ ಪಕ್ಕದಲ್ಲೇ ಹಾದುಹೋಗುವ ರಾ.ಹೆ. 66ರಲ್ಲಿ ಚತುಷ್ಪಥ ಕಾಮಗಾರಿಯ ವೇಳೆ ನಿರ್ಮಿಸಲಾದ ಮೇಲ್ಸೇತುವೆಯಲ್ಲಿ ಸಂಚಾರ ಮುಕ್ತಗೊಳಿಸಲಾಗಿದೆ.

ಕುಂದಾಪುರದಿಂದ ಕಾರವಾರದ ತನಕ ಹೆದ್ದಾರಿ ವಿಸ್ತರಣೆಯ ವೇಳೆ ಗುತ್ತಿಗೆದಾರರಿಗೆ ಈ ಸ್ಥಳದಲ್ಲಿ ಚತು ಷ್ಪಥ ಹೆದ್ದಾರಿಯನ್ನು ನಿರ್ಮಿಸುವಾಗ ಸ್ಥಳಾವಕಾಶದ ಕೊರತೆಯಿಂದ ಇಲ್ಲಿ ಹರಿಯುತ್ತಿರುವ ನದಿಯ ಅಂಚಿನಲ್ಲಿ ನದಿಗೆ ಪಿಲ್ಲರ್‌ ಅಳವಡಿಸಿ ನಿರ್ಮಿಸಲಾದ ಈ ಸೇತುವೆ ಕಾಮಗಾರಿ ಕಳೆದ ತಿಂಗಳು ಪೂರ್ಣ ಗೊಂಡಿದ್ದು ಇದನ್ನು ಸಂಪರ್ಕಿಸುವ ಸಂಪರ್ಕ ರಸ್ತೆಯ ಕಾಮಗಾರಿ ಮುಗಿದ ಬಳಿಕ ಈ ರಸ್ತೆಯಲ್ಲಿ ಸಂಚಾರಕ್ಕೆ ಮುಕ್ತಗೊಳಿಸಲಾಗಿದೆ. ಇದರ ಇನ್ನೊಂದು ಪಾರ್ಶ್ವದಲ್ಲಿ ಹೆದ್ದಾರಿ ಕಾಮಗಾರಿ ಆರಂಭ ವಾಗಬೇಕಾಗಿರುವುದರಿಂದ ಈ ಮೇಲ್ಸೇತುವೆಯಲ್ಲಿ ಸಂಚಾರ ಮುಕ್ತ ಗೊಳಿಸಲಾಗಿದೆ ಎನ್ನುವುದು ಐಆರ್‌ಬಿ ಎಂಜಿನಿಯರ್‌ಗಳು ತಿಳಿಸಿದ್ದಾರೆ.

Exit mobile version