Kundapra.com ಕುಂದಾಪ್ರ ಡಾಟ್ ಕಾಂ

ರೋಟರಿ ಕುಂದಾಪುರ ಅಧ್ಯಕ್ಷರಾಗಿ ಗಣೇಶ ಐತಾಳ್

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ರೋಟರಿ ಕ್ಲಬ್ ಕುಂದಾಪುರ 2017-18ನೇ ಸಾಲಿನ ಅಧ್ಯಕ್ಷರಾಗಿ ಗಣೇಶ್ ಐತಾಳ್ ಆಯ್ಕೆಯಾಗಿದ್ದಾರೆ.

ಕಾರ್ಯದರ್ಶಿಯಾಗಿ ಮೊಹಮ್ಮದ್ ಅಶ್ಫಕ್, ಉಪಾಧ್ಯಕ್ಷರಾಗಿ ಸತೀಶ್ ಕೊತ್ವಾಲ್, ವೆಂಕಟೇಶ್ ಪ್ರಭು, ಜತೆ ಕಾರ್ಯದರ್ಶಿಯಾಗಿ ಅನಿಲ್ ಕುಮಾರ್, ಶ್ರೀನಿವಾಸ ಶೇಟ್, ನಿಕಟಪೂರ್ವಾಧ್ಯಕ್ಷರಾಗಿ ಉದಯಕುಮಾರ್ ಶೆಟ್ಟಿ, ನಿರ್ದೇಶಕರಾಗಿ ಪ್ರವೀಣ್‌ಕುಮಾರ್ ಟಿ.(ಕ್ಲಬ್), ಕೆ.ಸಿ.ಶೆಟ್ಟಿ(ಕಮ್ಯೂನಿಟಿ ಸರ್ವಿಸ್), ಕೆ. ಆರ್. ನಾಯ್ಕ್(ಇಂಟರ್‌ನ್ಯಾಶನಲ್), ರಾಘವೇಂದ್ರ ಚರಣ ನಾವಡ(ಯೂತ್), ಕೆ.ಸುಭಾಶ್ಚಂದ್ರ ಶೆಟ್ಟಿ(ಟಿಆರ್‌ಎಫ್), ರಾಜೀವ ಶೆಟ್ಟಿ(ಪೋಲಿಯೋ ಪ್ಲಸ್), ಎಸ್. ಶಶಿಧರ ಶೆಟ್ಟಿ(ಲಿಟ್ರಸಿ), ಡಾ. ರಾಜಾರಾಮ್ ಶೆಟ್ಟಿ(ವಿನ್ಸ್), ಸಂತೋಷ್ ಕುಮಾರ್(ಸಾರ್ಜೆಂಟ್), ಪರಮೇಶ್ವರ ಹೆಗ್ಡೆ(ಬುಲೆಟಿನ್ ಎಡಿಟರ್) ಆಯ್ಕೆಯಾದರು.

ಜು.07 ಪದಪ್ರದಾನ : ರೋಟರಿ ಕ್ಲಬ್ ಕುಂದಾಪುರ ಪದಪ್ರದಾನ ಸಮಾರಂಭ ಜುಲೈ 07ರಂದು ಸಂಜೆ 7.15ಗಂಟೆಗೆ ಕುಂದಾಪುರದ ಬಸ್ರೂರು ರಸ್ತೆಯ ಈಸ್ಟ್ ವೆಸ್ಟ್ ಕಂಟ್ರಿ ಕ್ಲಬ್‌ನಲ್ಲಿ ನಡೆಯಲಿದೆ. ರೋಟರಿ ಜಿಲ್ಲಾ ಪೂರ್ವಾ ಗವರ್ನರ್ ಕೃಷ್ಣ ಶೆಟ್ಟಿ ಪದಪ್ರದಾನ ನೆರವೇರಿಸಲಿದ್ದು, ಮುಖ್ಯ ಅತಿಥಿಗಳಾಗಿ ರೋಟರಿ ವಲಯ ೧ರ ಅಸಿಸ್ಟೆಂಟ್ ಗವರ್ನರ್ ಕೆ.ಕೆ. ಕಾಂಚನ್, ಜೋನಲ್ ಲೆಫ್ಟಿನೆಂಟ್ ಮನೋಜ್ ನಾಯರ್ ಭಾಗವಹಿಸಲಿದ್ದಾರೆ.

Exit mobile version