Kundapra.com ಕುಂದಾಪ್ರ ಡಾಟ್ ಕಾಂ

ಧ್ವನಿ-ಬೆಳಕು ಸಂಯೋಜಕರ ಸಂಘಟನೆ ಬೈಂದೂರು ವಲಯದ ವಾರ್ಷಿಕ ಮಹಾಸಭೆ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಧ್ವನಿ-ಬೆಳಕು ಸಂಯೋಜಕರ ಸಂಘಟನೆ ರಿ. ಉಡುಪಿ ಜಿಲ್ಲೆ ಬೈಂದೂರು ವಲಯದ 6ನೇ ವಾರ್ಷಿಕ ಮಹಾಸಭೆ ಉಪ್ಪುಂದ ಮಾತೃಶ್ರೀ ಸಭಾಭವನದಲ್ಲಿ ಭಾನುವಾರ ನಡೆಯಿತು.

ಧ್ವನಿ-ಬೆಳಕು ಸಂಯೋಜಕರ ಸಂಘಟನೆ ಬೈಂದೂರು ವಲಯಾಧ್ಯಕ್ಷ ಶಶಿಧರ್ ಶೆಣೈ ಸಭೆಯ ಅಧ್ಯಕ್ಷತೆ ವಹಿಸಿದರು, ಗೌರವ ಉಪಸ್ಥಿತಿಗಳಾಗಿ ಎಚ್.ಉದಯ್ ಆಚಾರ್ ಜಿಲ್ಲಾಧ್ಯಕ್ಷರು ಧ್ವನಿ-ಬೆಳಕು ಸಂಯೋಜಕರ ಸಂಘಟನೆ ಉಡುಪಿ, ದಾಮೋದರ್ ಉಡುಪಿ ಧ್ವನಿ-ಬೆಳಕು ಸಂಯೋಜಕರ ಸಂಘಟನೆ ಪ್ರದಾನಕಾರ್ಯದರ್ಶಿ, ರೋನಿ ಬೆರೆಟ್ಟೊ ಕುಂದಾಪುರ, ಪುಂಡಲೀಕ ಕಾಮತ್ ಸಾಸ್ತಾನ, ಅನಿಲ್ ಕುಮಾರ್ ಉಡುಪಿ, ಅರೆಹಾಡಿ ಮಂಜು ದೇವಾಡಿಗ, ಅನ್ವಿ ಸೇಲ್ಯೂಶನ್ ಉಡುಪಿ ಇದರ ಮಾಲಿಕ ವಿನಯ ಕುಮಾರ್, ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಧ್ವನಿ-ಬೆಳಕು ಸಂಘಟನೆ ಸದಸ್ಯರ ಮಕ್ಕಳಿಗೆ ಉಚಿತ ಪುಸ್ತಕ, ಬ್ಯಾಗ್, ಕೊಡೆ ವಿತರಿಸಲಾಯಿತು. ಸಂಘಟನೆಯ ಜಿಲ್ಲಾಧ್ಯಕ್ಷ ಎಚ್. ಉದಯ್ ಆಚಾರ್ ಪ್ರಾಸ್ತಾವಿಕ ಮಾತಗಳನ್ನಾಡಿದರು, ಪ್ರಭಾಕರ ಜಿ ನಾಯ್ಕನಕಟ್ಟೆ ಕಾರ್ಯಕ್ರಮ ನಿರ್ವಹಿಸಿದರು, ಬೈಂದೂರು ವಲಯದ ಕಾರ್ಯದರ್ಶಿ ವಿನಾಯಕ ಪ್ರಭು ವಾರ್ಷಿಕ ವರದಿ ವಾಚನ ಮತ್ತು ಲೆಕ್ಕಪತ್ರ ಮಂಡಿಸಿದರು, ಸಂಘಟನೆಯ ಸದಸ್ಯ ಶೇಷು ಕಾರ್ಯಕ್ರಮ ವಂದಿಸಿದರು.

Exit mobile version