Kundapra.com ಕುಂದಾಪ್ರ ಡಾಟ್ ಕಾಂ

ಕಮಲಶಿಲೆ ದೇವಳಕ್ಕೆ ಕರ್ಣಾಟಕ ಬ್ಯಾಂಕ್ ಚೇರ್‌ಮೆನ್ ಜಯರಾಮ್ ಭಟ್ ಭೇಟಿ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಸಿದ್ಧಾಪುರ: ಇತಿಹಾಸ ಪ್ರಸಿದ್ದ ಶ್ರೀ ಬ್ರಾಹ್ಮೀ ದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ಕರ್ಣಾಟಕ ಬ್ಯಾಂಕ್ ಚೇರ್‌ಮೆನ್ ಪಿ. ಜಯರಾಮ್ ಭಟ್ ಅವರು ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು.

ದೇವಳಕ್ಕೆ ಭೇಟಿ ನೀಡಿದ ಕರ್ಣಾಟಕ ಬ್ಯಾಂಕ್ ಚೇರ್‌ಮೆನ್ ಪಿ. ಜಯರಾಮ್ ಭಟ್ ಅವರನ್ನು ದೇವಳದ ಸಹ ಮೋಕ್ತೇಸರರಾದ ಬಿ. ಶ್ರೀನಿವಾಸ ಚಾತ್ರ ಅವರು ಬರಮಾಡಿಕೊಂಡು ದೇವಳದ ವತಿಯಿಂದ ದಂಪತಿಗಳನ್ನು ಗೌರವಿಸಿದರು. ಈ ಸಂದರ್ಭದಲ್ಲಿ ಜಯರಾಮ್ ಭಟ್ ಅವರ ಪತ್ನಿ ಶುಭಾ ಭಟ್, ಪುತ್ರಿ ಚೈತ್ರಾ ಭಟ್, ಕರ್ಣಾಟಕ ಬ್ಯಾಂಕ್ ಎಜಿಎಂ. ವಿದ್ಯಾಲಕ್ಷ್ಮೀ, ಹೆಮ್ಸ್ ಫುಡ್ಸ್‌ನ ಆಡಳಿತ ನಿರ್ದೇಶಕ ರಾಘವೇಂದ್ರ ಹೆಮ್ಮಣ್ಣ, ನಿರ್ದೇಶಕಿ ಆಶಾಕಿರಣ ಹೆಮ್ಮಣ್ಣ, ನಾಗರಾಜ ಚಾತ್ರ ಇನ್ನಿತರರು ಉಪಸ್ಥಿತರಿದ್ದರು.

Exit mobile version