Kundapra.com ಕುಂದಾಪ್ರ ಡಾಟ್ ಕಾಂ

ಕೊಲ್ಲೂರು ಮಹಿಳಾ ಮಂಡಲ: ಮಕ್ಕಳಿಗೆ ಮುದ್ದು ರಾಧಾ-ಕೃಷ್ಣ ಸ್ವರ್ಧೆ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕೊಲ್ಲೂರು: ಇಲ್ಲಿನ ಮಹಿಳಾ ಮಂಡಳದ ವತಿಯಿಂದ ಸ್ವರ್ಣಮುಖಿ ರಂಗ ಮಂದಿರದಲ್ಲಿ ಮಕ್ಕಳಿಗೆ ಮುದ್ದು ರಾಧಾಕೃಷ್ಣ ಸ್ಪರ್ಧೆ ನಡೆಸಲಾಯಿತು. ತೀರ್ಪುಗಾರರಾಗಿ ಕೊಲ್ಲೂರು ಪ್ರಾಥಮಿಕ ಶಾಲಾ ಶಿಕ್ಷಕರಾದ ಕೃಷ್ಣ ಜಿ ಹಾಗೂ ಮಹಿಳಾ ಮಂಡಳದ ಮಾಜಿ ಅಧ್ಯಕ್ಷರಾದ ಲಲಿತಾಹಂದೆ ಯವರು ಹಾಗೂ ಸಭೆಯಲ್ಲಿ ಮುಖ್ಯ ಅತಿಥಿಗಳಾಗಿ ತಾಲ್ಲೂಕು ಪಂಚಾಯಿತಿ ಸದಸ್ಯರಾದ ಗ್ರೀಷ್ಮಾ ಗಿರಿಧರ ಬಿಢೆ ಹಾಗೂ ಕೊಲ್ಲೂರು ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ನೇತ್ರಾವತಿ ಆಚಾರಿ ಮತ್ತು ಮಹಿಳಾ ಮಂಡಳದ ಅಧ್ಯಕ್ಷೆಯಾದ ಶ್ರೀಮತಿ ಪ್ರಸನ್ನ ಶರ್ಮಾ ಹಾಗೂ ಉಪಾಧ್ಯಕ್ಷರಾದ ಲತಾ ಹಾಗೂ ಕಾರ್ಯದರ್ಶಿ ಸುಶೀಲಾ ಹೆಬ್ಬಾರ್ ಅವರು ಸಭೆಯಲ್ಲಿ ಉಪಸ್ಥಿತರಿದ್ದರು.

ಸ್ಪರ್ಧೆಯಲ್ಲಿ ಭಾಗವಹಿಸಿದ ಮಕ್ಕಳಿಗೆ ಕೊಲ್ಲೂರು ಜೀಪು ಚಾಲಕ ಹಾಗೂ ರಿಕ್ಷಾ ಚಾಲಕರು ಮತ್ತು ಟ್ಯಾಕ್ಸಿ ಚಾಲಕರ ವತಿಯಿಂದ ಮತ್ತು ವಿಧಾತ್ರಿ ವಸತಿಗೃಹದ ಮಾಲಿಕರು ಬಹುಮಾನ ವಿತರಣೆಯ ಪ್ರಾಯೋಜಕರಾಗಿದ್ದು ಸ್ಪರ್ಧೆಯಲ್ಲಿ ಭಾಗವಹಿಸಿದ ಎಲ್ಲ ಮಕ್ಕಳಿಗೆ ಬಹುಮಾನ ವಿತರಿಸಲಾಯಿತು.

 

Exit mobile version