Kundapra.com ಕುಂದಾಪ್ರ ಡಾಟ್ ಕಾಂ

ಚಿಣ್ಣರ ಚೈತ್ರೋತ್ಸವ ಬೇಸಿಗೆ ಶಿಬಿರ ಸಮಾಪನ

Summer campಬೈಂದೂರು: ಸುರಭಿ ಕಲಾ ಸಂಘ, ಬೈಂದೂರು ಯಸ್ಕೋರ್ಡ್ ಟ್ರಸ್ಟ್ ಮತ್ತು ಸೌಜನ್ಯ ಕಲಾ ಸಂಘ ಇದರ ಸಂಯುಕ್ತಾಶ್ರಯದಲ್ಲಿ ಆಶ್ರಮ ಶಾಲೆಯಲ್ಲಿ ಜರುಗಿದ ಹತ್ತು ದಿನಗಳ ಚಿಣ್ಣರ ಚೈತ್ರೋತ್ಸವ ಬೇಸಿಗೆ ಶಿಬಿರ ಸಮಾಪನಗೊಂಡಿತು

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪದವಿ ಪೂರ್ವ ಕಾಲೇಜು ಬೈಂದೂರಿನ ಉಪಪ್ರಾಂಶುಪಾಲೆ ಜ್ಯೋತಿ ಮಾತನಾಡಿ ಬೇಸಿಗೆ ಶಿಬಿರಗಳು ಮಕ್ಕಳ ವಿಕಸನಕ್ಕೆ ಸ್ವಚ್ಚಂದ ಪರಿಸರ ಒದಗಿಸಿ ಮಕ್ಕಳ ಕಲಿಕೆ ಪರಿಣಾಮಕಾರಿಯಾಗುವಂತೆ ಮಾಡುತ್ತದೆ ಎಂದರು.

ಮುಖ್ಯ ಅತಿಥಿಗಳಾಗಿ ಸಂಪನ್ಮೂಲ ವ್ಯಕ್ತಿಗಳಾದ ಮಹೇಶ ರಾಯಚೂರು, ಚಿತ್ರ ಕಲಾವಿದ ಗಿರೀಶ ತಗ್ಗರ್ಸೆ, ಮಹೇಶ ಪಲ್ಲಕ್ಕಿ ಉಪಸ್ಥಿತರಿದ್ದರು.
ಸುಧಾಕರ ಪಿ. ಸ್ವಾಗತಿಸಿ, ಗಣಪತಿ ಹೋಬಳಿದಾರ್ ಕಾರ್ಯಕ್ರಮ ನಿರ್ವಹಿಸಿದರು. ಕುಮಾರಿ ನಿಶ್ಚಿತಾ ವಂದಿಸಿದರು

Exit mobile version