Kundapra.com ಕುಂದಾಪ್ರ ಡಾಟ್ ಕಾಂ

ವರಾಹ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾಗಿ ಕುರು ರಾಮಚಂದ್ರ ಹೆಬ್ಬಾರ್

ಕುಂದಾಪ್ರ ಡಾಟ್ ಕಾಂ ಸುದ್ದಿ.
ಮರವಂತೆ: ಮರವಂತೆಯ ಮಹಾರಾಜಸ್ವಾಮಿ ವರಾಹ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾಗಿ ಕುರು ರಾಮಚಂದ್ರ ಹೆಬ್ಬಾರ್ ಆಯ್ಕೆಯಾಗಿದ್ದಾರೆ. ಸೋಮವಾರ ದೇವಸ್ಥಾನದಲ್ಲಿ ಸಮಿತಿಯ ಸದಸ್ಯರು ಸಭೆಸೇರಿ ಈ ಆಯ್ಕೆ ಮಾಡಿದರು. ಇದರ ಪೂರ್ವದಲ್ಲಿ ಜಿಲ್ಲಾ ಧಾರ್ಮಿಕ ಪರಿಷತ್ತು ಆಯ್ಕೆ ಮಾಡಿದ ಹೆಬ್ಬಾರ್ ಸೇರಿ ೯ ಜನರನ್ನು ಜಿಲ್ಲಾ ಹಿಂದು ಧಾರ್ಮಿಕ ಸಂಸ್ಥೆಗಳ ಮತ್ತು ಧರ್ಮಾದಾಯ ದತ್ತಿಗಳ ಇಲಾಖೆಯ ಸಹಾಯಕ ಆಯುಕ್ತರು ವ್ಯವಸ್ಥಾಪನಾ ಸಮಿತಿಯ ಸದಸ್ಯರಾಗಿ ನೇಮಕ ಮಾಡಿದ್ದರು.

ನೇಮಕಗೊಂಡ ಸದಸ್ಯರು : ಶಿವಾನಂದ ಮೊವಾಡಿ, ತ್ರಾಸಿ, ಶ್ರೀಮತಿ ಆಚಾರ್ಯ ಮರವಂತೆ, ನೀಲಾವತಿ ಖಾರ್ವಿ ಮರವಂತೆ, ಕೆ. ಎಂ. ಜನಾರ್ದನ ಮರವಂತೆ, ಚಂದ್ರ ಮೊಗವೀರ ಪಡುಕೋಣೆ, ನಾಡ, ಲಕ್ಷ್ಮಣ ಪೂಜಾರಿ ಹಡವು, ನಾರಾಯಣ ದೇವಾಡಿಗ ಮರವಂತೆ, ಪ್ರಧಾನ ಅರ್ಚಕ ನರಸಿಂಹ ಅಡಿಗ ತ್ರಾಸಿ, .

Exit mobile version