Kundapra.com ಕುಂದಾಪ್ರ ಡಾಟ್ ಕಾಂ

ಜೆ.ಸಿ.ಐ ಚಿತ್ತೂರು ಸಂಭ್ರಮ 2017: ಮಾರಣಕಟ್ಟೆ ಕೃಷ್ಣಮೂರ್ತಿ ಮಂಜರಿಗೆ ಸನ್ಮಾನ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಚಿತ್ತೂರು ಜೆಸಿಐ ಸಮೂಹದ ಸಮಾರೋಪ ಸಮಾರಂಭ ಮಾರಣಕಟ್ಟೆ ವಾಸುಕೀ ಸಭಾಭವನದಲ್ಲಿ ನೆಡೆಯಿತು. ಕಾರ್ಯಕ್ರಮದ ಅದ್ಯಕ್ಷತೆಯನ್ನು ಜೆ.ಸಿ.ಐ ಅದ್ಯಕ್ಷ ಅನಿಲ್ ಕುಮಾರ ಶೆಟ್ಟಿ ವಹಿಸಿದರು. ಮಖ್ಯ ಅತಿಥಿಯಾಗಿ ಆಗಮಿಸಿದ ವಿಧಾನ ಪರಿಷತ್ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ ಮಾತನಾಡಿ ಜೆ.ಸಿ.ಐ , ಎನ್ನುವ ಸಂಸ್ಥೆಗಳು ಹೆಚ್ಚು ತರಭೇತಿ ನೀಡುವುದರಿಂದ ಯುವಕರಲ್ಲಿರುವ ವ್ಯಕ್ತಿತ್ವ ವಿಕಸನಗೊಳ್ಳುತ್ತದೆ. ತನ್ಮೂಲಕ ಒಂದು ಉತ್ತಮ ಸಮಾಜ ನಿರ್ಮಾಣವಾಗುತ್ತದೆ ಎಂದರು. ಈ ಸಂಧರ್ಭದಲ್ಲಿ ಶ್ರೀ ಕ್ಷೇತ್ರ ಕೊಲ್ಲೂರು ಮಾಜಿ ಆಡಳಿತ ಧರ್ಮದರ್ಶಿ ಬಿ.ಎಮ್.ಸುಕುಮಾರ ಶೆಟ್ಟಿ ,ಪತ್ರಕರ್ತ ಕೆ.ಸಿ. ರಾಜೇಶ ,ಮೈಸುರು ಉದ್ಯಮಿ ಕೆ.ಭಾಸ್ಕರ್ ಶೆಟ್ಟಿ ಕೆರೆಕೊಡ್ಲು , ಜೆಸಿಐ ಸ್ಥಾಪಕ ಅದ್ಯಕ್ಷ ಉದಂi .ಜಿ. ಪೂಜಾರಿ , ನಿಕಟ ಪೂರ್ವ ಅದ್ಯಕ್ಷ ಗೋವರ್ಧನ ಜೋಗಿ ಉಪಸ್ಥಿತರಿದ್ದರು.

ಇದೇ ಸಂಧರ್ಭದಲ್ಲಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಧಾರ್ಮಿಕ , ಶೈಕ್ಷಣಿಕ ಕ್ಷೇತ್ರಗಳಿಗೆ ಕೊಡುಗೈ ದಾನಿ ಕೃಷ್ಣಮೂರ್ತಿ ಮಂಜ ಮಾರಣಕಟ್ಟೆ ಇವರನ್ನು ಸನ್ಮಾನಿಸಲಾಯಿತು. ಸನ್ಮಾನ ಪತ್ರ ಸಂತೋಷ ಶೆಟ್ಟಿ ಕಳಿ ಓದಿದರು. ಜೆಸಿಐ ಅದ್ಯಕ್ಷ ಅನಿಲ ಕುಮಾರ ಶೆಟ್ಟಿ ಸ್ವಾಗತಿಸಿ , ಗಣೇಶ ನಿರೂಪಿಸಿ , ಜೆಸಿಐ ಕಾರ್ಯದರ್ಶಿ ನಾಗರಾಜ ಉಡುಪ ಧನ್ಯವಾದ ಮಾಡಿದರು..

Exit mobile version