Kundapra.com ಕುಂದಾಪ್ರ ಡಾಟ್ ಕಾಂ

ಅನಾರೋಗ್ಯದಿಂದ ಬಳಲುತ್ತಿರುವ ಮಹಿಳೆಗೆ ಗಂಗೊಳ್ಳಿ ಮಹಿಳಾ ಬಿಲ್ಲವ ಸಂಘದ ನೆರವು

?

ಕುಂದಾಪ್ರ ಡಾಟ್ ಕಾಂ ಸುದ್ದಿ.
ಗಂಗೊಳ್ಳಿ : ಗಂಟಲು ಕ್ಯಾನ್ಸರ್‌ನಿಂದ ಬಳಲುತ್ತಿರುವ ಗಂಗೊಳ್ಳಿ ಸುಗ್ಗಿಬೈಲು ಸಂಪೆಕಟ್ಟೆ ನಿವಾಸಿ ರಾಧಾ ಅವರ ಶಸ್ತ್ರ ಚಿಕಿತ್ಸೆಗಾಗಿ ಗಂಗೊಳ್ಳಿಯ ಬ್ರಹ್ಮಶ್ರೀ ನಾರಾಯಣಗುರು ಮಹಿಳಾ ಬಿಲ್ಲವ ಸೇವಾ ಸಂಘದ ಸದಸ್ಯರು ೨೫ ಸಾವಿರ ರೂ.ಗಳನ್ನು ನೀಡಿದ್ದಾರೆ.

ಗಂಗೊಳ್ಳಿಯ ಬ್ರಹ್ಮಶ್ರೀ ನಾರಾಯಣಗುರು ಮಹಿಳಾ ಸಹಕಾರಿ ಸಂಘದ ವಠಾರದಲ್ಲಿ ಗುರುವಾರ ಜರಗಿದ ಕಾರ್ಯಕ್ರಮದಲ್ಲಿ ಬ್ರಹ್ಮಶ್ರೀ ನಾರಾಯಣಗುರು ಮಹಿಳಾ ಬಿಲ್ಲವ ಸೇವಾ ಸಂಘದ ಸದಸ್ಯರು ಸಂಗ್ರಹಿಸಿ ೨೫ ಸಾವಿರ ರೂ.ಗಳ ಚೆಕ್‌ನ್ನು ಸಂಘದ ಅಧ್ಯಕ್ಷೆ ಲಲಿತಾ ದುರ್ಗರಾಜ್ ಪೂಜಾರಿ ಅವರು ರಾಧಾ ಅವರ ಸಂಬಂಧಿ ಗಿರಿಜಾ ಅವರಿಗೆ ಗುರುವಾರ ಹಸ್ತಾಂತರಿಸಿದರು.

ಸಂಘದ ಉಪಾಧ್ಯಕ್ಷೆ ಗೌರಿ ಅಣ್ಣಪ್ಪ ಬಿಲ್ಲವ, ಕಾರ್ಯದರ್ಶಿ ಸುಶೀಲಾ ನಾರಾಯಣ ಪೂಜಾರಿ, ಸದಸ್ಯರಾದ ಲೀಲಾವತಿ ಎಸ್.ಜತ್ತನ್, ಲಲಿತಾ ವಿಶ್ವೇಶ್ವರ, ಶೋಭಾ ಕೃಷ್ಣ, ವಸಂತಿ ಎಂ.ಕುಂದರ್, ರತ್ನಾವತಿ ಪೂಜಾರಿ, ಶಾರದಾ ಪೂಜಾರಿ, ಉಷಾ ಪೂಜಾರಿ, ಸುಜಾತಾ ವಿಶ್ವಕಿರಣ್, ಗಂಗೊಳ್ಳಿ ಗ್ರಾಪಂ ಸದಸ್ಯ ದುರ್ಗರಾಜ್ ಪೂಜಾರಿ, ಬ್ರಹ್ಮಶ್ರೀ ನಾರಾಯಣಗುರು ಮಹಿಳಾ ಬಿಲ್ಲವ ಸೇವಾ ಸಂಘದ ಕಾರ್ಯದರ್ಶಿ ಪ್ರತಿಭಾ, ಸಿಬ್ಬಂದಿ ಜ್ಯೋತಿ ಮತ್ತಿತರರು ಉಪಸ್ಥಿತರಿದ್ದರು.

 

Exit mobile version