Kundapra.com ಕುಂದಾಪ್ರ ಡಾಟ್ ಕಾಂ

ದಲಿತ ಮಹಿಳೆಯ ಮೇಲೆ ದೆ„ಹಿಕ ಹಿಂಸೆ ಆರೋಪ

ಕೊಲ್ಲೂರು: ವಂಡ್ಸೆ ಸಮೀಪದ ಹಬ್ಬಿ ಹರವರಿ ನಿವಾಸಿ ದಲಿತ ಮಹಿಳೆಯೋರ್ವರಿಗೆ, ಆಕೆ ದುಡಿಯುತ್ತಿರುವ ಗೇರುಬೀಜ ಕಟ್ಟಿಂಗ್‌ ಉದ್ಯಮಿ ಹಬ್ಬಿ ಹರವರಿಯ ನಿವಾಸಿ ಮನೋಹರ ಗಾಣಿಗ ಎಂಬುವವರು ಆಕೆ ಗೇರುಬೀಜ ಕದ್ದೊಯ್ದಿರುವುದಾಗಿ ಸುಳ್ಳು ಆರೋಪ ಹೊರಿಸಿ ರೀಪಿನಿಂದ ಹೊಡೆದು ಕೈಹಿಡಿದು ಎಳೆದು ದೌರ್ಜನ್ಯ ಎಸಗಿರುವುದಾಗಿ ಕೊಲ್ಲೂರು ಠಾಣೆಗೆ ನೀಡಿದ ದೂರಿನಲ್ಲಿ ಆರೋಪಿಸಿದ್ದಾರೆ.

ಕೊಲ್ಲೂರು ಎಸ್‌.ಐ. ಜಯಂತ್‌ ಅವರು ಪ್ರಕರಣ ದಾಖಲಿಸಿ ಡಿವೈಎಸ್‌ಪಿ ಮಂಜುನಾಥ ಶೆಟ್ಟಿಯವರು ಪೂರ್ಣ ತನಿಖೆ ನಡೆಸುತ್ತಿದ್ದಾರೆ.

Exit mobile version