Kundapra.com ಕುಂದಾಪ್ರ ಡಾಟ್ ಕಾಂ

ಯುವಕನ ಮೇಲೆ ಮಾರಣಾಂತಿಕ ಹಲ್ಲೆ

ಬೈಂದೂರು: ಹಳೆ ದ್ವೇಷದ ಹಿನ್ನಲೆಯಲ್ಲಿ ಅಂಗಡಿಯೊಂದರ ಬಳಿ ನಿಂತಿದ್ದ ಯುವಕನೋರ್ವನ ಮೇಲೆ ಏಕಾಏಕಿ ದಾಳಿ ನಡೆಸಿದ ನಾಲ್ವರ ತಂಡ ಮಾರಣಾಂತಿಕ ಹಲ್ಲೆ ಮಾಡಿದ ಘಟನೆ ತಗ್ಗರ್ಸೆ ಗ್ರಾಮದಲ್ಲಿ ವರದಿಯಾಗಿದೆ.

ತಗ್ಗರ್ಸೆಯ ರವಿಂದ್ರ ಗಾಣಿಗ(31) ಹಾಗೂ ಅವರ ಸಹೋದರ ಕೃಷ್ಣ ಗಾಣಿಗ ಅಂಗಡಿಯ ಬಳಿ ನಿಂತಿದ್ದಾಗ ಬೈಕಿನಲ್ಲಿ ಬಂದ ತಗ್ಗರ್ಸೆಯವರೇ ಆದ ಶಶಿಧರ ಹುದಾರ್, ರಾಜು ಹುದಾರ್ ಎಂಬುವವರು ರವೀಂದ್ರನನ್ನು ತಡೆದು ಅವಾಚ್ಯ ಶಬ್ಧಗಳಿಂದ ನಿಂದಿಸಿ, ಕೆನ್ನೆಗೆ ಬಾರಿಸಿದ್ದಲ್ಲದೇ ರಾಡ್ ನಿಂದ ಕಾಲುಗೆ ಹೊಡೆದಿದ್ದಾರೆ. ಆ ಸಮಯದಲ್ಲಿ ತಪ್ಪಿಸಲು ಹೋದ ಕೃಷ್ಣ ಎಂಬುವವರಿಗೂ ಅಲ್ಲಿಗೆ ಬಂದ ನೀಲಕಂಠ ಹುದಾರ್ ಹಾಗೂ ಜಯರಾಜ ಹುದಾರ್ ಎಂಬುವವರು ಕೆನ್ನೆ ಹಾಗೂ ಮೈಕೈಗೆ ಗುದ್ದಿ, ಇಬ್ಬರಿಗೂ ಕೊಲೆ ಬೆದರಿಕೆ ಹಾಕಿದ್ದಾರೆ. ಹಳೆ ವೈಶಷ್ಯವೇ ಈ ಕೃತ್ಯಕ್ಕೆ ಕಾರಣ ಎನ್ನಲಾಗಿದೆ. ಬೈಂದೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು ತನಿಕೆ ನಡೆಸುತ್ತಿದ್ದಾರೆ.

Exit mobile version