Kundapra.com ಕುಂದಾಪ್ರ ಡಾಟ್ ಕಾಂ

ಬಿಲ್ಲವ ಸಮಾಜ ಸೇವಾ ಸಂಘದಲ್ಲಿ ಸಾಮೂಹಿಕ ವಿವಾಹ

ಕುಂದಾಪುರ: ಕುಂದಾಪುರ ಬಿಲ್ಲವ ಸಮಾಜ ಸೇವಾ ಸಂಘದ 5ನೇ ವರ್ಷದ ಉಚಿತ ಸಾಮೂಹಿಕ ವಿವಾಹ ಮಹೋತ್ಸವ ಶುಕ್ರವಾರ ನಾರಾಯಣಗುರು ಕಲ್ಯಾಣ ಮಂಟಪದಲ್ಲಿ ಜರುಗಿತು. ಬಿಲ್ಲವ ಸಮಾಜದ ನಾಗರಾಜ- ಶ್ರೀಲತಾ, ಮಯೂರ- ರೇಖಾ, ಗಣೇಶ- ಅಕ್ಷತಾ, ದಿನೇಶ್- ಆಶ್ವಿನಿ, ಗಿರೀಶ- ಲಕ್ಷ್ಮೀ ಜೋಡಿ ಹಸೆಮಣೆಗೇರಿದರು.
ವರ-ವಧುವಿಗೆ ಬೇಕಾದ ದೋತಿ, ಶಾಲು, ಪೇಟಾ, ಹೂವಿನಮಾಲೆ, ಧಾರೆಸೀರೆ, ರವಿಕೆ ಕಣ, ಬಾಸಿಂಗ, ಮಂಗಳಸೂತ್ರ ಉಚಿತವಾಗಿ ನೀಡಲಾಯಿತು. ವಧು ವರರ ಕಡೆಯವರಿಗೆ ಸುಗ್ರಾಸ ಭೋಜನ ವ್ಯವಸ್ಥೆ ನಡೆಸಲಾಯಿತು. ಐವರು ಜೋಡಿಗಳ ಪೈಕಿ ಗಿರೀಶ ಮತ್ತು ಲಕ್ಷ್ಮೀ ಜೋಡಿ ಗಮನ ಸೆಳೆಯಿತು. ವಿಕಲಾಚೇತನೆ ಲಕ್ಷ್ಮೀಯವರ ಕೈಹಿಡಿಯುವ ಮೂಲಕ ಗಿರೀಶ್ ಗಮನ ಸೆಳೆದರು.

ಬೈಂದೂರು ಶಾಸಕ ಕೆ.ಗೋಪಾಲ ಪೂಜಾರಿ, ಬಿಲ್ಲವ ಸಮಾಜ ಸೇವಾ ಸಂಘದ ಅಧ್ಯಕ್ಷ ಎನ್.ಟಿ.ಪೂಜಾರಿ, ನಾರಾಯಣಗುರು ಯುವಕ ಮಂಡಲ ಅಧ್ಯಕ್ಷ ಡುಂಡಿರಾಜ್ ಹಟ್ಟಿಕುದ್ರು, ಬಿಲ್ಲವ ಮಹಿಳಾ ಸಂಘದ ಅಧ್ಯಕ್ಷೆ ಲಲಿತಾ ಸುವರ್ಣ ಉಪಸ್ಥಿತರಿದ್ದರು.

ಮುಂಬೈ ಉದ್ಯಮಿ ಭೋಜರಾಜ, ಪುರುಷೋತ್ತಮ ಮುಂಬೈ, ಶಾರದಾ ಕರ್ಕೇರಾ, ಬಾಬುಶಿವ ಪೂಜಾರಿ, ಕುಂದಾಪುರ ತಾ.ಪಂ.ಅಧ್ಯಕ್ಷ ಭಾಸ್ಕರ ಬಿಲ್ಲವ, ಪುರಸಭೆ ಸದಸ್ಯ ರಾಜೇಶ್ ಕಾವೇರಿ, ಬೆಂಗಳೂರು ಉದ್ಯಮಿ ವಿ.ಕೆ.ಮೋಹನ್, ವಿ.ಕೆ.ಗೋಪಾಲ್, ಉದ್ಯಮಿ ವಿಠಲ ಪೂಜಾರಿ, ಸಂಘದ ಹಿರಿಯ ಮುಖಂಡ ಮಾಣಿಗೋಪಾಲ್, ರಾಜೀವ ಕೋಟ್ಯಾನ್ ಉಪಸ್ಥಿತರಿದ್ದು, ನವ ವಧೂ ವರರಿಗೆ ಅಕ್ಷತೆ ಹಾಕಿ ಭವಿಷ್ಯದ ದಾಂಪತ್ಯ ಜೀವನಕ್ಕೆ ಶುಭ ಕೋರಿದರು.

Exit mobile version