Kundapra.com ಕುಂದಾಪ್ರ ಡಾಟ್ ಕಾಂ

ರಾಜ್ಯ ಮಟ್ಟದ ನಾಟಕ ಸ್ವರ್ಧೆ: ಲಾವಣ್ಯ ಬೈಂದೂರು ಪ್ರಸ್ತುತಿಯ ‘ಗಾಂಧಿಗೆ ಸಾವಿಲ್ಲ’ ತೃತೀಯ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ರಂಗಭೂಮಿ ಉಡುಪಿ ಆಯೋಜಿಸಿದ 38ನೇ ವರ್ಷದ ರಾಜ್ಯ ಮಟ್ಟದ ನಾಟಕ ಸ್ವರ್ಧೆಯಲ್ಲಿ ಬೈಂದೂರಿನ ಪ್ರತಿಷ್ಠಿತ ನಾಟಕ ಸಂಸ್ಥೆ ಲಾವಣ್ಯ ತಂಡ ಪ್ರಸ್ತುತಪಡಿಸಿದ ‘ಗಾಂಧಿಗೆ ಸಾವಿಲ್ಲ’ ನಾಟಕ ತೃತೀಯ ಸ್ಥಾನ ಪಡೆದುಕೊಂಡಿದೆ.

ನಾಟಕದಲ್ಲಿ ಶ್ರೇಷ್ಠ ರಂಗಪರಿಕರಕ್ಕಾಗಿ ಹಾಗೂ ಪ್ರಸಾದನಕ್ಕಾಗಿ ಮೂರನೇ ಸ್ಥಾನ, ಶ್ರೇಷ್ಠ ಬೆಳಕಿಗಾಗಿ ಎರಡನೇ ಸ್ಥಾನ ಪಡೆದುಕೊಂಡಿದೆ. ಗೋಡ್ಸೆ ಪಾತ್ರಧಾರಿ ಸುಬ್ರಹ್ಮಣ್ಯ ಜಿ. ಉಪ್ಪುಂದ ಮೆಚ್ಚಗೆ ಗಳಿಸಿದ್ದಾರೆ. ಅಸ್ಗರ್ ವಜಾಹತ್ ರಚನೆಯ ಹಸನ ನಯೀಂ ಸುರಕೋಡ ಕನ್ನಡಕ್ಕೆ ಭಾಷಾಂತರದ ನಾಟಕವನ್ನು ಗಿರೀಶ್ ಬೈಂದೂರು ನಿರ್ದೇಶಿಸಿದ್ದರು.

Exit mobile version